Connect with us

Dvgsuddi Kannada | online news portal | Kannada news online

ಇಂದ್ರಜಿತ್ ಬೇಷರತ್ ಕ್ಷಮೆಗೆ ನಟಿ ಮೇಘನಾ ರಾಜ್ ಫಿಲ್ಮಂ ಚೇಂಬರ್ ಗೆ ಪತ್ರ  

ಪ್ರಮುಖ ಸುದ್ದಿ

ಇಂದ್ರಜಿತ್ ಬೇಷರತ್ ಕ್ಷಮೆಗೆ ನಟಿ ಮೇಘನಾ ರಾಜ್ ಫಿಲ್ಮಂ ಚೇಂಬರ್ ಗೆ ಪತ್ರ  

ಡಿವಿಜಿ ಸುದ್ದಿ, ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಚಿರಂಜೀವಿ ಸರ್ಜಾ ಬಗ್ಗೆ ಹೇಳಿಕೆ ನೀಡಿರುವುದು ನನಗೆ ತುಂಬಾ  ನೋವಾಗಿದೆ.  ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು  ಎಂದು ನಟಿ ಮೃಘನಾ ರಾಜ್ ಅವರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಫಿಲ್ಮಂ ಚೇಂಬರ್ ನಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ  ಎನ್.ಎಮ್ ಸುರೇಶ್ ಅವರು   ಮೇಘನಾ ರಾಜ್ ಬರೆದ ಓದಿದರು.  ಪತ್ರದಲ್ಲಿ ಇಂದ್ರಜಿತ್ ಮಾತುಗಳಿಂದ  ಮಾನಸಿಕವಾಗಿ  ನೊಂದಿದ್ದೇನೆ.  ಗರ್ಭಿಣಿ ಆಗಿರುವ ನಾನು ಮಾನಸಿಕ ತೊಳಲಾಟದಲ್ಲಿದ್ದೇನೆ. ನನ್ನ ದಿವಂಗತ ಪತಿ ಮೇಲೆ ಇಂದ್ರಜಿತ್ ಆರೋಪ ಮಾಡಿದ್ದಾರೆ. ಇಂದ್ರಜಿತ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಲಿ ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಮೇಘನಾ ರಾಜ್ ಪತ್ರದ ಹಿನ್ನೆಲೆಯಲ್ಲಿ ಇಂದ್ರಜಿತ್ ಅವರಿಗೆ ಪತ್ರ ಬರೆಯುತ್ತೇವೆ. ಈ ಮೂಲಕ ಮೇಘನಾಬರೆದ ಪತ್ರದ ವಿಷಯವನ್ನು ಇಂದ್ರಜಿತ್ ಗಮನಕ್ಕೆ ತರುವುದಾಗಿ ಕೆ.ವಿ ಚಂದ್ರಶೇಖರ್ ತಿಳಿಸಿದರು.

ಈ ವಿಚಾರ ಭಾರೀ ಚರ್ಚೆಯಾಗುತ್ತಿದ್ದಂತೆಯೇ ಇಂದ್ರಜಿತ್ ಅವರು ತನ್ನ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದ್ದರು. ಈಗಾಗಲೇ ನಾನು ಚಿರಂಜೀವಿ ಸರ್ಜಾ ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಸುಂದರ್ ರಾಜ್ ಅವರ ಬಗ್ಗೆ ನೀಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top