ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ವಿವಿಧ ಸ್ನಾತಕೋತ್ತರ ಕೇಂದ್ರಗಳಲ್ಲಿ ಬೋಧಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಯುಜಿಸಿ ನಿಯಮಾನುಸಾರ ಪೂರ್ಣಕಾಲಿಕ/ ಅರೆಕಾಲಿಕ ಅತಿಥಿ ಉಪನ್ಯಾಸಕ, ಗ್ರಂಥಪಾಲಕ ಹಾಗೂ ಕ್ರೀಡಾ, ದೈಹಿಕ ಹಾಗೂ ಸಾಂಸತಿಕ ಶಿಕ್ಷಣ ವಿಭಾಗದಲ್ಲಿ ಸಹಾಯಾಕ ಕ್ರೀಡಾ ನಿರ್ದೇಶಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ.
ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, 2021-22ನೇ ಶೈಕ್ಷಣಿಕ ಸಾಲಿಗೆ ಮಾತ್ರ ಸೀಮಿತವಾಗಿರುತ್ತದೆ. ಎಲ್ಲ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾಥಿರ್ಗಳು ಅರ್ಜಿ ಸಲ್ಲಿಸಬಹುದು. ನಂದಿಹಳ್ಳಿ , ಕೊಪ್ಪಳ, ಯುಲಬುರ್ಗಾದಲ್ಲಿರುವ ಸ್ನಾತಕೋತ್ತರ ಕೇಂದ್ರಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳು ಯಾವುದೇ ಕೇಂದ್ರದಲ್ಲಾದರೂ ಸೇವೆ ಸಲ್ಲಿಸಲು ಸಿದ್ಧರಿರಬೇಕು.
ಹುದ್ದೆಗಳು: ಕನ್ನಡ ಅಧ್ಯಯನ ವಿಭಾಗ – 11, ಇಂಗ್ಲಿಷ್ -1 , ಪ್ರದರ್ಶನ ನಾಟಕ – 3, ವಾಣಿಜ್ಯಶಾಸ್ತ್ರ – 8, ಇತಿಹಾಸ ಮತ್ತು ಪುರಾತತ್ವ – 9, ಅರ್ಥಶಾಸ್ತ್ರ – 4, ರಾಜ್ಯಶಾಸ್ತ್ರ – 6, ಸಮಾಜಕಾರ್ಯ – 5, ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗ – 5, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ – 2, ಮಹಿಳಾ ಅಧ್ಯಯನ ವಿಭಾಗ – 2, ರಸಾಯನಶಾಸ್ತ್ರ/ ಔದ್ಯೋಗಿಕ ರಸಾಯನಶಾಸ್ತ್ರ – 11, ಭೌತಶಾಸ್ತ್ರ – 5, ಪ್ರಾಣಿಶಾಸ್ತ್ರ – 1, ಗಣಿತಶಾಸ್ತ್ರ – 2, ಸಸ್ಯಶಾಸ್ತ್ರ – 2, ಗಣಕಯಂತ್ರ – 4, ಜೈವಿಕ ತಂತ್ರಜ್ಞಾನ – 3, ಸೂಕ್ಷ್ಮ ಜೀವಶಾಸ್ತ್ರ – 3, ಖನಿಜ ಸಂಸ್ಕರಣ ಅಧ್ಯಯನ ವಿಭಾಗ – 5, ಕಾನೂನು – 1, ಶಿಕ್ಷಣ ವಿಭಾಗ – 1, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ – 4, ಅನ್ವಯಿಕ ಭೂ ವಿಜ್ಞಾನ – 2, ಸಹಾಯಕ ಗ್ರಂಥಪಾಲಕ – 6, ಸಹಾಯಕ ಕ್ರೀಡಾ ನಿರ್ದೇಶಕ – 2 ಒಟ್ಟು 100 ಹುದ್ದೆಗಳು.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ, ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ ನಿಗದಿಯಾಗಿದ್ದು, ಡಿಡಿ ಮೂಲಕ ಪಾವತಿಸತಕ್ಕದ್ದು. ಸರ್ಕಾರದ ನಿಯಮಾವಳಿ ಅನ್ವಯ ಅರ್ಹತೆ (ಮೆರಿಟ್) ಹಾಗೂ ಮೀಸಲಾತಿ ಆಧಾರದ ಮೇಲೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ ವಿಧಾನ: ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭತಿರ್ ಮಾಡಿದ ಅರ್ಜಿ ಜತೆ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ವಿವರ, ಜಾತಿ, ವರ್ಗ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿದ ಪ್ರತಿ, ಅರ್ಜಿ ಶುಲ್ಕ ಪಾವತಿಸ ದಾಖಲೆಯನ್ನು ಸೇರಿಸಿ ಖುದ್ದಾಗಿ/ ರಿಜಿಸ್ಟರ್ಡ್ ಅಂಚೆ ಮೂಲಕ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ‘ಜ್ಞಾನ ಸಾಗರ’ ಆವರಣ, ವಿನಾಯಕ ನಗರ, ಕಂಟೋನ್ಮೆಂಟ್, ಬಳ್ಳಾರಿ- 583 105 ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಅ.16 ಕೊನೇ ದಿನವಾಗಿದೆ. ಹೆಚ್ಚಿನ ಮಾಹಿತಿಗೆ: http://vskub.ac.in/ ಸಂಪರ್ಕಿಸಿ.



