ವಿಜಯನಗರ: ಸಂಪಾದಿತಲೇ ಪರಾಕ್ …!!, ಇದು ಐತಿಹಾಸಿಕ ಶ್ರೀ ಮೈಲಾರ ಲಿಂಗೇಶ್ವರ ಕಾರ್ಣಿಕ. ಈ ಬಾರಿ ಮಳೆ, ಬೆಳೆ ಚೆನ್ನಾಗಿ ಆಗುವ ಸೂಚನೆಯನ್ನು ಗೊರವಯ್ಯ ರಾಮಣ್ಣ ಕಾರ್ಣಿಕದಲ್ಲಿ ನುಡಿದ್ದಾರೆ. ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದ ಬರಗಾಲ ಆವರಿಸಿ ರೈತರು ಕಂಗೆಟ್ಟಿದ್ದರು. ಇದೀಗ ಶ್ರೀ ಮೈಲಾರ ಲಿಂಗೇಶ್ವರ ಕಾರ್ಣಿಕದಿಂದ ಈ ವರ್ಷ ಉತ್ತಮ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ಕೃಷಿಕರು ಮೈಲಾರ ಕಾರ್ಣಿಕದಿಂದ ಮಳೆ, ಬೆಳೆ ನಿರ್ಧರಿಸುವ ವಾಡಿಕೆ ಇದೆ…
ಇಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿನ ಸುಕ್ಷೇತ್ರ ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಿತು.ಗೊರವಯ್ಯ ರಾಮಣ್ಣ ಅವರು ಕಾರ್ಣಿಕ ನುಡಿಯನ್ನು ನುಡಿದಿದ್ದಾರೆ. ಅದೇ ಸಂಪಾದಿತಲೇ ಪರಾಕ್ ಎಂಬುದಾಗಿದೆ.
ಗೊರವಯ್ಯನ ಕಾರ್ಣಿಕ ನುಡಿ ಸಂಪಾದಿತಲೇ ಪರಾಕ್ ಎಂದಿದ್ದಾರೆ. ಹೀಗಾಗಿ ಈ ಸಲ ಉತ್ತಮ ಮಳೆ, ಬೆಳೆ ಆಗಿ, ರೈತರ ಬಾಳು ಹಸನಾಗಲಿದೆ ಎಂಬುದು ಜನರ ವಿಶ್ಲೇಷಣೆ ಮಾಡಿದ್ದಾರೆ.



