ಸಿರಿಗೆರೆ: ಚಿತ್ರದುರ್ಗ ತಾಲೂಕಿನ ಸಿರಿಗೆರೆಯ ತರಳಬಾಳು ಬೃಹನ್ಮಠದ ಐತಿಹಾಸಿಕ ತರಳಬಾಳು ಹುಣ್ಣಿಮೆ ಮಹೋತ್ಸವ ಈ ಬಾರಿ ಆನ್ ಲೈನ್ ನಲ್ಲಿ ನಡೆಯಲಿದೆ. ಕೊಟ್ಟೂರಲ್ಲಿ ಮಹೋತ್ಸವ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ, ಕೊರೊನಾ ಸಂಕಷ್ಟ ಹಿನ್ನೆಲೆ ಮಠದಲ್ಲಿಯೇ ಸರಳವಾಗಿ ಆಚರಿಸಲಾಗುತ್ತಿದೆ. ಇಂದಿನಿಂದ (ಫೆ.19) ಫೆ. 27 ವರೆಗೆ ಆನ್ ಲೈನ್ ನಲ್ಲಿ ಪ್ರತಿ ದಿನ ಸಂಜೆ 6.45ಕ್ಕೆ ಕಾರ್ಯಕ್ರಮ ನಡೆಯಲಿದೆ.
ತರಳಬಾಳು ಹುಣ್ಣಿಮರ ಮಹೋತ್ಸವನ್ನು ಯ್ಯೂಟೂಬ್ ನಲ್ಲಿ https://www.youtube.com/channel/UCuUAJc9ydIUh7RfObIl_4mg ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದಾಗಿದೆ. ಕಾರ್ಯಕ್ರಮವೂ ಪ್ರತಿ ದಿನ ಸಂಜೆ 6.45 ರಿಂದ ರಾತ್ರಿ 9 ಗಂಟೆ ವರೆಗೆ ನಡೆಯಲಿದೆ.
ದಿನಾಂಕ 21-2-2021 ರಂದು ನಡೆಯಲಿರುವ “ಆದಿಕವಿ ಪುರಸ್ಕಾರ” ಸಮಾರಂಭವು ಬಹಿರಂಗ ಸಭೆ ಇಲ್ಲದೆ ನಡೆಯಲಿದೆ. ಶಿಷ್ಯರು ಯಾರೂ ಸಿರಿಗೆರೆಗೆ ಬರಬಾರದಾಗಿ ವಿನಮ್ರದಿಂದ ಶ್ರೀಗಳಿ ವಿನಂತಿ ಮಾಡಿದ್ದು, ಯ್ಯೂಟೂಬ್ ನಲ್ಲಿ ಕಾರ್ಯಕ್ರಮ ವೀಕ್ಷಿಸಲು ಸೂಚಿಸಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಿರಿಗೆರೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ.



