Connect with us

Dvgsuddi Kannada | online news portal | Kannada news online

ಹರಿಹರ: ಸಿಡಿಲು ಬಡಿದು 6 ಕುರಿ ಸಾವು

ಪ್ರಮುಖ ಸುದ್ದಿ

ಹರಿಹರ: ಸಿಡಿಲು ಬಡಿದು 6 ಕುರಿ ಸಾವು

ಡಿವಿಜಿ ಸುದ್ದಿ, ಹರಿಹರ: ಸಿಡಿಲು-ಗುಡುಗು ಸಹಿತ ಭಾರೀ ಮಳೆಗೆ 6  ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಿದರೆ ಗ್ರಾಮದಲ್ಲಿ ನಡೆದಿದೆ.

ಚಿಕ್ಕಬಿದರೆ ಗ್ರಾಮದ ಗುಡ್ಡದಲ್ಲಿ ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು 6 ಕುರಿಗಳು ಸಾವನ್ನಪ್ಪಿವೆ. 3 ಕುರಿಗಳು ತೀವ್ರವಾಗಿ ಅಸ್ವಸ್ಥಗೊಂಡಿವೆ.  ಘಟನಾ ಸ್ಥಳಕ್ಕೆ ಪಶು ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಅಧಿಕಾರಿ ಆನಂದ ಮಾತನಾಡಿ ಚಿಕ್ಕಬಿದರೆ ಗ್ರಾಮದ ಜೋಗಳಿ ಸಣ್ಣ ಸಿದ್ದಪ್ಪ ತಂದೆ ರಾಮಪ್ಪ ಇವರ ಸಂಬಂಧಿಸಿದ ಕುರಿಗಳನ್ನು ಮೇಯಿಸಲು ಗುಡ್ಡದ ಕಡೆಗೆ ಹೋಗಿದ್ದ ಸಮಯದಲ್ಲಿ ಮಳೆಯ ಪ್ರಾರಂಭ ಮುನ್ಸೂಚನೆ ಗೊತ್ತಾಗುತ್ತಿದ್ದಂತೆ ಕುರಿಗಳ ಹಿಂಡನ್ನು ಮನೆ ಕಡೆಗೆ ತಲುಪಿಸುವುದಕ್ಕೆ ಮುಂದಾದರು ಅದೇ ವೇಳೆ ಗುಡುಗು-ಸಿಡಿಲು ಜೋರಾಗಿದ್ದರಿಂದ ಹಿಂದೆ ಉಳಿದುಕೊಂಡ ಒಂಬತ್ತು ಕುರಿಗಳಲ್ಲಿ 6 ಕುರಿಗಳಿಗೆ ಸಿಡಿಲು ಬಡೆದು ಸ್ಥಳದಲ್ಲೇ ಮೃತಪಟ್ಟರೆ, ಇನ್ನುಳಿದ ಮೂರು ಕುರಿಗಳು ಅಸ್ವಸ್ಥ ವಾಗಿವೆ ಎಂದಿದರು.

ಕಳೆದ ಎರಡು ದಿನಗಳಿಂದ ಮಳೆಯ ಅರ್ಭಟಕ್ಕೆ ಹರಿಹರ ನಗರದಲ್ಲಿ 2  ಮನೆ ಹನಿ ಆಗಿದೆ. ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಅನಾಹುತದ ಪ್ರದೇಶಗಳಿಗೆ ಕಂದಾಯ ಇಲಾಖೆ ತಂಡ ಭೇಟಿ ನೀಡಿ ವರದಿಯನ್ನು ತಾಸಿಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top