Connect with us

Dvgsuddi Kannada | online news portal | Kannada news online

ಶಾಮನೂರು ಹೇಳಿಕೆಯನ್ನು ಯಾರು ಒಪ್ಪುವಂತಹದಲ್ಲ; ಸಿದ್ದರಾಮಯ್ಯ ಲಿಂಗಾಯತ ವಿರೋಧಿಯಲ್ಲ; ಶಾಸಕ ಬಸವರಾಜ ರಾಯರೆಡ್ಡಿ

IMG 20231003 143348

ದಾವಣಗೆರೆ

ಶಾಮನೂರು ಹೇಳಿಕೆಯನ್ನು ಯಾರು ಒಪ್ಪುವಂತಹದಲ್ಲ; ಸಿದ್ದರಾಮಯ್ಯ ಲಿಂಗಾಯತ ವಿರೋಧಿಯಲ್ಲ; ಶಾಸಕ ಬಸವರಾಜ ರಾಯರೆಡ್ಡಿ

ಬೆಂಗಳೂರು: ಜಾತಿ ಆಧಾರದ ಮೇಲೆ ಅಧಿಕಾರಿಗಳಿಗೆ ಪೋಸ್ಟಿಂಗ್ ಕೊಡುವುದು, ಕೇಳುವುದು ಸರಿಯಲ್ಲ. ಲಿಂಗಾಯತರಿಗೆ ಅನ್ಯಾಯ ಅನ್ನೋದನ್ನ ಒಪ್ಪುವಂತಹದಲ್ಲ. ಬಸವ ತತ್ವ ಸಾಮಾಜಿಕ‌ ನ್ಯಾಯದ ಮೇಲೆ ನಿಂತಿದೆ. ಶಾಮನೂರು ಶಿವಶಂಕರಪ್ಪ ಹೇಳಿಕೆ 100% ತಪ್ಪು. ಅದನ್ನು ಯಾರೂ ಒಪ್ಪುವುದಿಲ್ಲ.‌ ಶಾಸಕರಾಗಿ ಅವರು ಮಾತನಾಡಿದ್ದು ತಪ್ಪುಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಿವಶಂಕರಪ್ಪಗೆ ಮಾಹಿತಿಯ ಕೊರತೆಯಿದೆ. ದಾವಣಗೆರೆಯಲ್ಲಿ ಜಿ.ಪಂ ಸಿಇಒ, ಎಸ್ ಪಿ ಸೇರಿ ಮೂವರು ಲಿಂಗಾಯತ ಅಧಿಕಾರಿಗಳಿದ್ದಾರೆ.ಜಾತಿ ಆಧಾರಿತವಾಗಿ ಮಾತನಾಡುವುದು ಸರಿಯಲ್ಲ. ನಾನು ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವನು. ಲಿಂಗಾಯತರಿಗೆ ಅನ್ಯಾಯ ಅನ್ನೋದನ್ನ ಒಪ್ಪಲ್ಲ ಎಂದರು.

ಬಸವ ತತ್ವ ಸಾಮಾಜಿಕ‌ ನ್ಯಾಯದ ಮೇಲೆ ನಿಂತಿದೆ.ಶಾಮನೂರರ ಹೇಳಿಕೆ 100% ತಪ್ಪು. ಅದನ್ನು ಯಾರೂ ಒಪ್ಪುವುದಿಲ್ಲ. ಶಾಮನೂರು ಶಾಸಕರಾಗಿ ಮಾತನಾಡಿದ್ದು ತಪ್ಪು. ನಾನು ಜಾತಿ ಆಧಾರಿತವಾಗಿ ಮಾತನಾಡಿದ್ರೆ ತಪ್ಪೇ. ನಾವು ಅಧಿಕಾರಿಗಳಲ್ಲಿ ಜಾತಿ ನೋಡಬಾರದು. ಅಧಿಕಾರಿಗಳನ್ನ ಈ ರೀತಿ ನೋಡಬಾರದು. ಇಲ್ಲವೇ ಮುಂದೆ ಅನರ್ಹರೆಲ್ಲ ಮಾತನಾಡುತ್ತಾರೆ.

ಜಾತಿ ಆಧಾರದಲ್ಲಿ ಪ್ರಾದೇಶಿಕ ಅಸಮಾನತೆ ತಪ್ಪಿಸಲು ಜಾತಿ ಆಧಾರಿತವಾಗಿ ಸಂಪುಟ ರಚಿಸಬಹುದು. ಸಿದ್ದರಾಮಯ್ಯ ಅದನ್ನು ಮಾಡಿದ್ದಾರೆ. ಪ್ರಧಾನಿಯಾರು ಬೇಕಾದರೂ ಆಗಬಹುದು. ಆದರೆ ಅಟೆಂಡರ್ ಮಾಡಲಿಕ್ಕೆ ಸಾಧ್ಯವಿಲ್ಲ ಅಟೆಂಡರ್ ಆಗೋಕೆ ಕ್ವಾಲಿಪಿಕೇಶನ್ ಇರಬೇಕು. ಸಿದ್ದರಾಮಯ್ಯ ಲಿಂಗಾಯತ ವಿರೋಧಿಯಲ್ಲ. ಅವರು ಬಸವತತ್ವ ಪರಿಪಾಲಕರು. ಲಿಗಾಯತರಿಗೆ ಅವರು ಅನ್ಯಾಯ ಮಾಡಿಲ್ಲ ಎಂದು ಬಸವರಾಜ ರಾಯರೆಡ್ಡಿ ಸಮರ್ಥನೆ ಮಾಡಿಕೊಂಡರು. ನಿತೀಶ್ ಪಾಟೀಲ್, ದಿವಾಕರ್, ಗೋವಿಂದರೆಡ್ಡಿ ಲಿಂಗಾಯತ ಡಿಸಿಗಳೂ ಇದ್ದಾರೆ. ಶಾಮನೂರರ ಹೇಳಿಕೆಯನ್ನು ಅವರು ಬೆಂಬಲಿಸಿದ್ದು ತಪ್ಪು. ಯಾರೇ ಆಗಲಿ ಜಾತಿ ಆಧಾರಿತವಾಗಿ ನೋಡಬಾರದು ಎಂದರು.

 

ದಾವಣಗೆರೆ: ಭೂ ಪರಿವರ್ತನೆಗೆ 1.50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಾ. ಪಂ. ಇಒ, ಗ್ರಾ.ಪಂ ಪಿಡಿಒ

ಹೇ.., ಎಲ್ಲಿ ಅನ್ಯಾಯ ಆಗಿದೆ ಎಂಬುದನ್ನು ಅವರಿಗೆ ತೋರಸ್ತೀವಿ; ಸಿದ್ದರಾಮಯ್ಯ ಜೊತೆ‌ ಮುಂದೆ ಮಾತಾಡಿ ಬಗೆಹರಿಸಿಕೊಳ್ಳುತ್ತೇನೆ ನಡಿ; ಶಾಮನೂರು ಶಿವಶಂಕರಪ್ಪ

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top