ಬೆಂಗಳೂರು: ಜಾತಿ ಆಧಾರದ ಮೇಲೆ ಅಧಿಕಾರಿಗಳಿಗೆ ಪೋಸ್ಟಿಂಗ್ ಕೊಡುವುದು, ಕೇಳುವುದು ಸರಿಯಲ್ಲ. ಲಿಂಗಾಯತರಿಗೆ ಅನ್ಯಾಯ ಅನ್ನೋದನ್ನ ಒಪ್ಪುವಂತಹದಲ್ಲ. ಬಸವ ತತ್ವ ಸಾಮಾಜಿಕ ನ್ಯಾಯದ ಮೇಲೆ ನಿಂತಿದೆ. ಶಾಮನೂರು ಶಿವಶಂಕರಪ್ಪ ಹೇಳಿಕೆ 100% ತಪ್ಪು. ಅದನ್ನು ಯಾರೂ ಒಪ್ಪುವುದಿಲ್ಲ. ಶಾಸಕರಾಗಿ ಅವರು ಮಾತನಾಡಿದ್ದು ತಪ್ಪುಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಿವಶಂಕರಪ್ಪಗೆ ಮಾಹಿತಿಯ ಕೊರತೆಯಿದೆ. ದಾವಣಗೆರೆಯಲ್ಲಿ ಜಿ.ಪಂ ಸಿಇಒ, ಎಸ್ ಪಿ ಸೇರಿ ಮೂವರು ಲಿಂಗಾಯತ ಅಧಿಕಾರಿಗಳಿದ್ದಾರೆ.ಜಾತಿ ಆಧಾರಿತವಾಗಿ ಮಾತನಾಡುವುದು ಸರಿಯಲ್ಲ. ನಾನು ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವನು. ಲಿಂಗಾಯತರಿಗೆ ಅನ್ಯಾಯ ಅನ್ನೋದನ್ನ ಒಪ್ಪಲ್ಲ ಎಂದರು.
ಬಸವ ತತ್ವ ಸಾಮಾಜಿಕ ನ್ಯಾಯದ ಮೇಲೆ ನಿಂತಿದೆ.ಶಾಮನೂರರ ಹೇಳಿಕೆ 100% ತಪ್ಪು. ಅದನ್ನು ಯಾರೂ ಒಪ್ಪುವುದಿಲ್ಲ. ಶಾಮನೂರು ಶಾಸಕರಾಗಿ ಮಾತನಾಡಿದ್ದು ತಪ್ಪು. ನಾನು ಜಾತಿ ಆಧಾರಿತವಾಗಿ ಮಾತನಾಡಿದ್ರೆ ತಪ್ಪೇ. ನಾವು ಅಧಿಕಾರಿಗಳಲ್ಲಿ ಜಾತಿ ನೋಡಬಾರದು. ಅಧಿಕಾರಿಗಳನ್ನ ಈ ರೀತಿ ನೋಡಬಾರದು. ಇಲ್ಲವೇ ಮುಂದೆ ಅನರ್ಹರೆಲ್ಲ ಮಾತನಾಡುತ್ತಾರೆ.
ಜಾತಿ ಆಧಾರದಲ್ಲಿ ಪ್ರಾದೇಶಿಕ ಅಸಮಾನತೆ ತಪ್ಪಿಸಲು ಜಾತಿ ಆಧಾರಿತವಾಗಿ ಸಂಪುಟ ರಚಿಸಬಹುದು. ಸಿದ್ದರಾಮಯ್ಯ ಅದನ್ನು ಮಾಡಿದ್ದಾರೆ. ಪ್ರಧಾನಿಯಾರು ಬೇಕಾದರೂ ಆಗಬಹುದು. ಆದರೆ ಅಟೆಂಡರ್ ಮಾಡಲಿಕ್ಕೆ ಸಾಧ್ಯವಿಲ್ಲ ಅಟೆಂಡರ್ ಆಗೋಕೆ ಕ್ವಾಲಿಪಿಕೇಶನ್ ಇರಬೇಕು. ಸಿದ್ದರಾಮಯ್ಯ ಲಿಂಗಾಯತ ವಿರೋಧಿಯಲ್ಲ. ಅವರು ಬಸವತತ್ವ ಪರಿಪಾಲಕರು. ಲಿಗಾಯತರಿಗೆ ಅವರು ಅನ್ಯಾಯ ಮಾಡಿಲ್ಲ ಎಂದು ಬಸವರಾಜ ರಾಯರೆಡ್ಡಿ ಸಮರ್ಥನೆ ಮಾಡಿಕೊಂಡರು. ನಿತೀಶ್ ಪಾಟೀಲ್, ದಿವಾಕರ್, ಗೋವಿಂದರೆಡ್ಡಿ ಲಿಂಗಾಯತ ಡಿಸಿಗಳೂ ಇದ್ದಾರೆ. ಶಾಮನೂರರ ಹೇಳಿಕೆಯನ್ನು ಅವರು ಬೆಂಬಲಿಸಿದ್ದು ತಪ್ಪು. ಯಾರೇ ಆಗಲಿ ಜಾತಿ ಆಧಾರಿತವಾಗಿ ನೋಡಬಾರದು ಎಂದರು.
ದಾವಣಗೆರೆ: ಭೂ ಪರಿವರ್ತನೆಗೆ 1.50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಾ. ಪಂ. ಇಒ, ಗ್ರಾ.ಪಂ ಪಿಡಿಒ



