Connect with us

Dvgsuddi Kannada | online news portal | Kannada news online

ವಲಸೆ ಹೋದ ಮಂತ್ರಿಗಳು ಮನೆ ಸೆಂಟ್ರಿಂಗ್ ಇದ್ದಂಗೆ: ಮೇಲ್ಛಾವಣಿ ಗಟ್ಟಿಯಾದ ಮೇಲೆ ಕಿತ್ತು ಬೀಸಾಕ್ತಾರೆ: ಲಕ್ಷ್ಮಣ್

ರಾಜಕೀಯ

ವಲಸೆ ಹೋದ ಮಂತ್ರಿಗಳು ಮನೆ ಸೆಂಟ್ರಿಂಗ್ ಇದ್ದಂಗೆ: ಮೇಲ್ಛಾವಣಿ ಗಟ್ಟಿಯಾದ ಮೇಲೆ ಕಿತ್ತು ಬೀಸಾಕ್ತಾರೆ: ಲಕ್ಷ್ಮಣ್

ಮೈಸೂರು: ವಲಸೆ ಮಂತ್ರಿಗಳೆಲ್ಲ ಹೊಸ ಮನೆ ಸೆಂಟ್ರಿಂಗ್ ಸಾಮಾನು ಇದ್ದಂಗೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ವಲಸೆ ಹೋದವರ ಸ್ಥಿತಿ ಮತ್ತಷ್ಟು ಕೆಡುತ್ತದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.

ಇನ್ನು 6 ತಿಂಗಳಲ್ಲಿ ಬಿಜೆಪಿ 5 ವಲಸೆ ಮಂತ್ರಿಗಳನ್ನ ಕೆಳಗಿಸುತ್ತಾರೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ.ಬಿಜೆಪಿಗೆ ಹೋಗಿರುವ ವಲಸೆ ಮಂತ್ರಿಗಳೆಲ್ಲ ಹೊಸ ಮನೆಗೆ ಸೆಂಟ್ರಿಂಗ್ ಇದ್ದ ಹಾಗೇ. ಮನೆ ಮೇಲ್ಛಾವಣಿ ನಿಂತ ಮೇಲೆ ಸೆಂಟ್ರಿಂಗ್ ಕಿತ್ತು ಬಿಸಾಕಿದ ಹಾಗೇ ವಲಸೆ ಮಂತ್ರಿಗಳನ್ನ ಕಿತ್ತು ಬಿಸಾಕಲಿದ್ದಾರೆ ಎಂದರು.

ಬಿಸಿ ಪಾಟೀಲ್, ಸುಧಾರಕರ್, ಗೋಪಾಲಯ್ಯ, ನಾರಾಯಣಗೌಡ, ಆರ್.ಶಂಕರ್‌ರನ್ನ ಮೊದಲು ಕಿತ್ತು ಬಿಸಾಕಲಿದ್ದಾರೆ. ನಂತರ ಆರು ತಿಂಗಳಲ್ಲಿ ಮತ್ತೆ 5 ಜನರನ್ನು ಕಿತ್ತು ಹಾಕಲಿದ್ದಾರೆ. ಇದಂತೂ ಖಚಿತ ಎಂದು ಹೇಳಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಜಕೀಯ

To Top
(adsbygoogle = window.adsbygoogle || []).push({});