Connect with us

Dvgsuddi Kannada | online news portal | Kannada news online

ಯತ್ನಾಳ್ ವಿರುದ್ಧ ಕಿಡಿಕಾರಿದ ಸಚಿವ ಈಶ್ವರಪ್ಪ

ರಾಜಕೀಯ

ಯತ್ನಾಳ್ ವಿರುದ್ಧ ಕಿಡಿಕಾರಿದ ಸಚಿವ ಈಶ್ವರಪ್ಪ

ದಾವಣಗೆರೆ: ಕಳೆದ 5 ತಿಂಗಳಿಂದ ಆನಾರೋಗ್ಯದಿಂದ ಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿದ  ಶಾಸಕ ಬಸನಗೌಡ ಪಾಟೀಲ್  ಯತ್ನಾಳ್  ವಿರುದ್ಧ ಸಚಿವ  ಕೆ. ಎಸ್. ಈಶ್ವರಪ್ಪ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವನೋ ಕುಡಿದು ಹೇಳಿಕೆ ನೀಡಿದ್ರೆ ಅದನ್ನು ಕೇಳೋಕೆ ಆಗುತ್ತಾ..? ನಮ್ಮವನೇ ಆಗಿರಲಿ ಯಾವನೇ ಆಗಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ನಾಳೆ ನಮ್ಮ ಹೊಸವರ್ಷ ಅಲ್ಲ. ಅದು ಬ್ರಿಟಿಷ್ ಕ್ಯಾಲಂಡರ್ ವರ್ಷ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಕುಡಿದು ಗಲಾಟೆ ಮಾಡುವಂತಿಲ್ಲ. ಕುಡಿದು ಗಲಾಟೆ ಮೋಜು‌ ಮಸ್ತಿ ಅಂತ ಸಾರ್ವಜನಿಕರ ನೆಮ್ಮದಿಗೆ ಭಂಗ ತರಬಾರದು. ಅಂಥವರ ಮೇಲೆ ನಮ್ಮ ಸರ್ಕಾರ ಕಟ್ಟನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಪಾಕಿಸ್ಥಾನ ಜಿಂದಾಬಾದ್ ಎಂಬ ಹೇಳಿಕೆಯನ್ನು ಬಿಜೆಪಿ ಸರ್ಕಾರ ಬಗಳ ಗಂಭೀರವಾಗಿ ತಗೆದುಕೊಂಡಿದೆ. ಎಸ್ ಡಿಪಿಐ ನ ಅಹಂಕಾರ ಇನ್ನು ಕಡಿಮೆಯಾಗಿಲ್ಲ. ಈ ಹಿಂದಿನ ಸರ್ಕಾರಗಳು ನೀಡಿದ ಬೆಂಬಲ ಕಾರಣ  ಸೊಕ್ಕು ಬಂದಿದೆ .ಬರಿ ನಾಲ್ಕೇ ಸೀಟು ಗೆದ್ದಿರೋ‌ಈ ರೀತಿ ಕೂಗಿರೋದು ದೇಶಕ್ಕೆ ಮಾಡಿದ ಅವಮಾನ.ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೆ ನಾಲ್ವರ ಮೇಲೆ ಎಪ್ ಐ ಆರ್ ಹಾಕಲಾಗಿದೆ  ಎಂದು ತಿಳಿಸಿದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಜಕೀಯ

ದಾವಣಗೆರೆ

Advertisement
Advertisement Enter ad code here

Title

To Top