ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯಾಸ, ದಣಿವು ಆಗಿದ್ದು, ರಾಜಕೀಯ ನಿವೃತ್ತಿ ಪಡೆಯುವುದು ಒಳ್ಳೆಯದು ಎಂದು ಶಾಸಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ವಯಸ್ಸಿನ ಕಾರಣದಿಂದ ಸಿಎಂ ಬಿಎಸ್ವೈ ಗೊಂದಲದ ಹೇಳಿಕೆ ಕೊಟ್ಟಿದ್ದಾರೆ. ಸಿಎಂ ಗೊಂದಲದಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಸಿಎಂ ಬೆಳಗ್ಗೆ ಒಂದು ಸಂಜೆ ಒಂದು ಹೇಳಿಕೆ ನೀಡುತ್ತಾರೆ. ಸಿಎಂ ಯಡಿಯೂರಪ್ಪಗೆ ಆಯಾಸ, ದಣಿವು ಆಗಿದೆ ಎಂದರು.
ಬೆಳಗ್ಗೆಯೇ ಈ ಆದೇಶ ನೀಡಿದ್ರೆ ಆಕ್ರೋಶ ಭುಗಿಲೇಳ್ತಿರಲಿಲ್ಲ. ಸಿಎಂ ಬಿಎಸ್ವೈ ಬದಲು ಕುಟುಂಬದವರಿಂದ ಆಡಳಿತ ನಡೆಸಲಾಗುತ್ತಿದೆ. ವಿಜಯೇಂದ್ರ ಮತ್ತು ಕುಟುಂಬ ಸರ್ಕಾರ ನಡೆಸುತ್ತಿದೆ. ಪ್ರಧಾನಿಗೆ ಕುಟುಂಬ ರಾಜಕಾರಣ ಮುಕ್ತ ಕನಸಿದೆ. ಬಿಎಸ್ ವೈ ಕುಟುಂಬದಿಂದ ಕರ್ನಾಟಕ ಮುಕ್ತ ಆಗಬೇಕು ಎಂದು ಹೇಳಿದರು.
ಹೈಕಮಾಂಡ್ ಗೌರವಯುತ ಬೇಡಿಕೆಗೆ ಸಜ್ಜಾಗಿದೆ. ಆದರೆ, ಬಿಎಸ್ ವೈ ಕುಟುಂಬ ಉದ್ಧಾರ ಮಾಡಬೇಕು. ತಮ್ಮ ಕುಟುಂಬವನ್ನು ಉದ್ಧಾರ ಮಾಡಲು ವಿಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.



