Connect with us

Dvgsuddi Kannada | online news portal | Kannada news online

ಮೀಸಲಾತಿ ಪಟ್ಟು ಬಿಡದ ಪಂಚಮಸಾಲಿ ಶ್ರೀ; ಮನವೊಲಿಕೆಗೆ ಬಂದ ಸಚಿವ ನಿರಾಣಿ, ಸಿಸಿ ಪಾಟೀಲ್ ನಿಯೋಗ

ಪ್ರಮುಖ ಸುದ್ದಿ

ಮೀಸಲಾತಿ ಪಟ್ಟು ಬಿಡದ ಪಂಚಮಸಾಲಿ ಶ್ರೀ; ಮನವೊಲಿಕೆಗೆ ಬಂದ ಸಚಿವ ನಿರಾಣಿ, ಸಿಸಿ ಪಾಟೀಲ್ ನಿಯೋಗ

ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ  ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಮೀಸಲಾತಿ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ವಾಮಿಜಿ ಪಟ್ಟು ಹಿಡಿದು ಬೆಂಗಳೂರಿನತ್ತ ಪಾದಯಾತ್ರೆ ಮುನ್ನುಗ್ಗುತ್ತಿದೆ.  ಈ ಹಿನ್ನೆಲೆಯಲ್ಲಿ ಸರ್ಕಾರದ ಪರ ನಿಯೋಗದಿಂದ ಸ್ವಾಮೀಜಿ ಮನವೊಲಿಕೆ ಯತ್ನ ಕೂಡ ನಡೆದಿದೆ. ಈಗಾಗಲೇ ಪಾದಯಾತ್ರೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ತಲುಪಿದೆ.  ಮೀಸಲಾತಿ ವಿಚಾರದಲ್ಲಿ ರಾಜಿಯಾಗುವ  ಪ್ರಶ್ನೆಯೇ ಇಲ್ಲ. ಯಾವ ನಿಯೋಗ ಬಂದರೂ ಮೀಸಲಾತಿ ಪರ ಮಾತನಾಡಲಿ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದಿಂದ  ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ ನೇತೃತ್ವದ ಸರ್ಕಾರದ ನಿಯೋಗ ಸ್ವಾಮೀಜಿ ಭೇಟಿಯಾಗಿದ್ದು, ಮನವೊಲಿಕೆ ಯತ್ನ ನಡೆಯುತ್ತಿದೆ. ಆದರೆ, ಸ್ವಾಮೀಜಿ ಪಾದಯಾತ್ರೆ ಕೈ ಬಿಡಲು ಒಪ್ಪುತ್ತಿಲ್ಲ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top