ನವದೆಹಲಿ: ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಬಿಹಾರದ ಕೆಲವೆಡೆ ಜುಲೈ ತಿಂಗಳಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಪ್ರಮಾಣದ ಮಳೆ ಆಗಬಹುದು ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದಲ್ಲಿ ಜುಲೈ ತಿಂಗಳಲ್ಲಿ ಮುಂಗಾರು ಮಳೆ ಪ್ರಮಾಣ ಸಾಮಾನ್ಯವಾಗಿ ಇರಲಿದೆ.ಪಂಜಾಬ್, ಜಮ್ಮು-ಕಾಶ್ಮೀರ, ಅಸ್ಸಾಂನಲ್ಲಿ ಮಳೆ ಕೊರತೆ ಆಗಬಹುದು ಎಂದು ಇಲಾಖೆಯು ಅಂದಾಜು ಮಾಡಿದೆ.
ಜೂನ್ ತಿಂಗಳಲ್ಲಿ ಮಳೆ ದೇಶದಲ್ಲಿ ಮುಂಗಾರು ಮಳೆಯು ಶೇ 45ರಷ್ಟು ಕೊರತೆ ಆಗಿದೆ. ಕೊರತೆ ಪ್ರಮಾಣ ದೇಶದ ಕೇಂದ್ರ ಭಾಗದಲ್ಲಿ ಶೇ 6ರಷ್ಟಿದ್ದರೆ, ಉತ್ತರದಲ್ಲಿ ಶೇ 18ರಷ್ಟಿದೆ. ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಶೇ 42ರಷ್ಟು ಅಧಿಕ ಮಳೆಯಾಗಿದೆ. ಜೂನ್ ತಿಂಗಳ ದ್ವಿತೀಯಾರ್ಧದಲ್ಲಿ ಬಿಪೊರ್ಜಾಯ್ ಚಂಡಮಾರುತದ ಪರಿಣಾಮ ಕೆಲವೆಡೆ ಉತ್ತಮವಾಗಿತ್ತು. ಆದರೆ, ಒಟ್ಟು 717 ಜಿಲ್ಲೆಗಳ ಪೈಕಿ ಸುಮಾರು 400 ಜಿಲ್ಲೆಗಳಲ್ಲಿ ಇದೇ ಕಾರಣದಿಂದ ಮಳೆ ಕೊರತೆಯಾಗಿದೆ ಎಂದು ಇಲಾಖೆಯು ವಿವರಿಸಿದೆ.



