Connect with us

Dvgsuddi Kannada | online news portal | Kannada news online

ನೋಟ್ ಬ್ಯಾನ್  ನಿರ್ಧಾರಕ್ಕೆ 4 ವರ್ಷ ; ಕಪ್ಪು ಹಣ ಕಡಿಮೆಯಾಗಿ ತೆರಿಗೆ ಹೆಚ್ಚಳ; ಪ್ರಧಾನಿ

ರಾಷ್ಟ್ರ ಸುದ್ದಿ

ನೋಟ್ ಬ್ಯಾನ್  ನಿರ್ಧಾರಕ್ಕೆ 4 ವರ್ಷ ; ಕಪ್ಪು ಹಣ ಕಡಿಮೆಯಾಗಿ ತೆರಿಗೆ ಹೆಚ್ಚಳ; ಪ್ರಧಾನಿ

ನವದೆಹಲಿ: ಐತಿಹಾಸಿಕ ನೋಟ್ ಬ್ಯಾನ್  ನಿರ್ಧಾರಕ್ಕೆ ನಾಲ್ಕು ವರ್ಷ ತುಂಬಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು  ನೋಟು ನಿಷೇಧ ನಿರ್ಧಾರದಿಂದ ಕಪ್ಪು ಹಣ ಕಡಿಮೆಯಾಗಿದೆ.  ತೆರಿಗೆ ಪ್ರಮಾಣ ಹೆಚ್ಚಳವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನೋಟ್ ಬ್ಯಾನ್ ನಿರ್ಧಾರದಿಂದ ಪಾರದರ್ಶಕತೆ ಹೆಚ್ಚಾಗಿದ್ದು ರಾಷ್ಟ್ರೀಯ ಅಭಿವೃದ್ಧಿಗೆ ನೆರವಾಗಿದೆ. ಈ ಬಗ್ಗೆ  ಟ್ವೀಟ್‌ನಲ್ಲೇ ಏನು ಬದಲಾವಣೆಯಾಗಿದೆ ಎಂಬುದನ್ನು ಗ್ರಾಫಿಕ್ ಮೂಲಕ ವಿವರಿಸಿದ್ದಾರೆ.

ನೋಟು ನಿಷೇಧದ  ‘ಆಪರೇಷನ್‌ ಕ್ಲೀನ್‌ ಮನಿʼ ಬಳಿಕ ಸ್ವ ಮೌಲ್ಯ ಮಾಪನ ಮಾಡಿ13 ಸಾವಿರ ಕೋಟಿಗೂ ಅಧಿಕ ಹಣ ಪಾವತಿಯಾಗಿದೆ. 3.4 ಲಕ್ಷ ಜನರು 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಹಣವನ್ನು ಠೇವಣಿ ಇಟ್ಟಿದ್ದರು. ಈ ಮೂಲಕ ಐಟಿ ರಿಟರ್ನ್‌ ಸಲ್ಲಿಸಿದವರ ವಿವರ ಬಹಿರಂಗೊಂಡಿತು. ಬಳಿಕ 2.9 ಲಕ್ಷ ಜನ ತೆರಿಗೆಯಾಗಿ 6,531 ಕೋಟಿ ರೂ. ಹಣವನ್ನು ಪಾವತಿ ಮಾಡಿದ್ದಾರೆ.

ಈ ಮಹತ್ವದ ನಿರ್ಧಾರದಿಂದ  ತೆರಿಗೆ ಜಿಡಿಪಿ ಅನುಪಾತ ಹೆಚ್ಚಳವಾಗಿದೆ. 2015-16ರ ಹಣಕಾಸು ವರ್ಷದಲ್ಲಿ 16.41 ಲಕ್ಷ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿತ್ತು 2014-15ಕ್ಕೆ ಹೋಲಿಸಿದರೆ ಶೇ.14.51 ಹೆಚ್ಚಳವಾಗಿತ್ತು. ಇದೇ ಲೆಕ್ಕಾಚಾರವನ್ನು ಪರಿಗಣಿಸಿದ್ದರೆ 2019-20ರ ವೇಳೆಗೆ ದೇಶದಲ್ಲಿ 28.49 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇರಬೇಕಿತ್ತು. ಆದರೆ ಸದ್ಯ 2019-20ರ ಹಣಕಾಸು ವರ್ಷದಲ್ಲಿ 24.20 ಲಕ್ಷ ಕೋಟಿ ಹಣ ಚಲಾವಣೆಯಲ್ಲಿದೆ. ಡಿಜಿಟಲ್‌ ಹಣ ಪಾವತಿ ಹೆಚ್ಚಳದಿಂದಾಗಿ ನೋಟುಗಳ ಸಂಖ್ಯೆ ಕಡಿಮೆಯಾಗಿದೆ.

2 thousand notes

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರ ನವೆಂಬರ್ 8ರ ರಾತ್ರಿ ಏಕಾಏಕಿಯಾಗಿ 500ರೂ ಹಾಗೂ 1,000 ರೂ. ನೋಟುಗಳನ್ನು ನಿಷೇಧ ಮಾಡಿತ್ತು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top