ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಏಳನೇ ಕಂತಿನ 2 ಸಾವಿರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಡಿಸೆಂಬರ್ 1ರಿಂದ ಆರಂಭವಾಗಲಿದೆ.
ಈ ಯೋಜನೆಯಡಿ ವಾರ್ಷಿಕ 2 ಸಾವಿರದಂತೆ ಮೂರು ಕಂತುಗಳಲ್ಲಿ ಒಟ್ಟು 6000 ರೂಪಾಯಿ ನೀಡಲಾಗುತ್ತಿದೆ. ಈಗಾಗಲೇ ರೈತರಿಗೆ ಈವರೆಗೆ 6 ಕಂತು 11.17 ಕೋಟಿ ರೈತರಿಗೆ 95 ಕೋಟಿ ರೂಪಾಯಿ ಹೆಚ್ಚು ನೆರವು ನೀಡಿದೆ. ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31, ಎರಡನೇ ಕಂತು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ ಮತ್ತು ಆಗಸ್ಟ್ 1 ರಿಂದ ನವೆಂಬರ್ 30 ರ ನಡುವೆ ಮೂರನೇ ಕಂತಿನಲ್ಲಿ ರೈತರಿಗೆ ಹಣ ಬರುತ್ತದೆ.
ನಿಮ್ಮ ಎಲ್ಲ ದಾಖಲೆಗಳು ಸರಿಯಾಗಿದ್ದರೆ 11.17 ಕೋಟಿ ನೋಂದಾಯಿತ ರೈತರಿಗೆ ಏಳನೇ ಕಂತಿನ ಲಾಭ ಸಿಗಲಿದೆ. ಒಂದು ವೇಳೆ ನಿಮ್ಮ ದಾಖಲೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಖಂಡಿತ ನೀವು ಯೋಜನೆಯ ಪ್ರಯೋಜನ ವನ್ನು ಪಡೆಯುವುದಿಲ್ಲ. ಕೃಷಿ ಸಚಿವಾಲಯದ ಮೂಲಗಳ ಪ್ರಕಾರ, 1.3 ಕೋಟಿ ರೈತರು ಅರ್ಜಿ ಸಲ್ಲಿಸಿ, ಹಣ ಪಡೆದಿಲ್ಲ. ದಾಖಲೆಯಲ್ಲಿ ದೋಷವಿದ್ದರೆ ಹಣ ವರ್ಗಾವಣೆ ಯಾಗುವುದಿಲ್ಲ. ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಲಿಂಕ್ ಮಾಡಲಾಗಿದೆ. ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ರೈತರಿಗೆ ಮೂರು ದಾಖಲೆಗಳ ಅಗತ್ಯವಿರುತ್ತದೆ. ಆದ್ದರಿಂದ ಕೆಸಿಸಿಗೆ ಅರ್ಜಿ ಸಲ್ಲಿಸದವರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಇದು ಮೋದಿ ಸರ್ಕಾರದ ಅತಿ ದೊಡ್ಡ ರೈತ ಯೋಜನೆಯಾಗಿರುವುದರಿಂದ ರೈತರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ರೈತರ ಅನುಕೂಲಕ್ಕಾಗಿ ಸರ್ಕಾರ ಹಲವು ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. ಈ ಸಂಖ್ಯೆಗಳ ಮೂಲಕ ದೇಶದ ಯಾವುದೇ ಭಾಗದ ರೈತರು ನೇರವಾಗಿ ಕೃಷಿ ಸಚಿವಾಲಯವನ್ನು ಸಂಪರ್ಕಿಸಬಹುದು.
- ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
- ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ: 155261
- ಪಿಎಂ ಕಿಸಾನ್ ಲ್ಯಾಂಡ್ ಲೈನ್ ಸಂಖ್ಯೆಗಳು: 011-23381092, 23382401
- ಪಿಎಂ ಕಿಸಾನ್ ನ ಹೊಸ ಸಹಾಯವಾಣಿ: 011-24300606
- ಪಿಎಂ ಕಿಸಾನ್ ಮತ್ತೊಂದು ಸಹಾಯವಾಣಿ: 0120-6025109
- ಇಮೇಲ್ ID: pmkisan-ict@gov.in



