ದಾವಣಗೆರೆ: ಕುರುಬರ ಎಸ್ಟಿ ಹೋರಾಟದಲ್ಲಿ ಆರ್ಎಸ್ಎಸ್ ಪಾತ್ರ ಇಲ್ಲ. ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೊರಾಟ ನಡೆಯುತ್ತಿದೆ. ಆದರೆ, ಈ ವಿಚಾರವನ್ನು ಎಡಪಂಥೀಯರು ಆರ್ಎಸ್ಎಸ್ ಪಾತ್ರ ಇದೆ ಎನ್ನುತ್ತಿದ್ದಾರೆ. ಅವರಿಗೆ ಆರ್ಎಸ್ಎಸ್ ಭಯ. ಅದಕ್ಕೆ ಈ ಆರೋಪ ಮಾಡ್ತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಕೋಟ್ಯಂತರ ದೇಶಭಕ್ತರನ್ನು ಸೃಷ್ಟಿಸಿದ್ದು ಆರ್ಎಸ್ಎಸ್. ಕಾಮಾಲೆ ರೋಗದವರಿಗೆ ಎಲ್ಲ ಹಳದಿಯೇ ಕಾಣವುದು ಎಂದು ಟೀಕಿಸಿದರು. ಈ ಹೋರಾಟ ಪಕ್ಷಾತೀತವಾಗಿ ನಡೆಯುತ್ತಿದೆ. ನಾನು, ಎಚ್.ಎಂ. ರೇವಣ್ಣ, ಬಂಡೆಪ್ಪ ಕಾಶೆಂಪೂರ, ವಿಶ್ವನಾಥ್ ಹೀಗೆ ಎಲ್ಲ ಪಕ್ಷದವರು ಇದ್ದಾರೆ ಎಂದು ತಿಳಿಸಿದರು.



