ವಿಜಯನಗರ: ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್’ … ಇದು ಈ ವರ್ಷದ ವಿಜಯನಗರ ಜಿಲ್ಲೆ ಹೂವಿನ ಹಡಗಲಿಯ ಮೈಲಾರದ ಮೈಲಾರಲಿಂಗೇಶ್ವರ ಗೊರವಪ್ಪನ ಕಾರ್ಣಿಕ . ಕೋವಿಡ್ ನಿಂದ ಈ ವರ್ಷ ಹೊರಗಿನ ಭಕ್ತರಿಗೆ ಕಾರಣಿಕಕ್ಕೆ ಬರಲು ನಿಷೇಧ ಹೇರಿದ್ದರಿಂದ ಸಂಪ್ರದಾಯದಂತೆ ಗೊರವಪ್ಪ ಬಿಲ್ಲನ್ನು ಏರಿ ಕಾರ್ಣಿಕ ನುಡಿದರು.
ಈ ವರ್ಷದ ಕಾರಣಿಕವನ್ನು ವಿಶ್ಲೇಷಿಸಿದರೆ, ಈ ಬಾರಿ ರಾಜ್ಯ ರಾಜಕಾರಣ ಮೂರು ಭಾಗ ಆಗುತ್ತೆ. ರೈತರು ಬೆಳೆದ ಬೆಳೆ ಕೂಡ ಮೂರು ಪಾಲಾಗುತ್ತೆ ಎಂದು ಕಾರ್ಣಿಕ ನುಡಿದಿದೆ. ಐತಿಹಾಸಿಕ ಮೈಲಾರದಲ್ಲಿ ಕಾರ್ಣಿಕ ಕೇಳಲು ಸಾವಿರಾರು ಜನ ಸೇರ್ತಾರೆ. ಅಂದ್ಹಾಗೆ, ಗೋರವಯ್ಯ ನುಡಿಯುವ ಈ ಕಾರ್ಣಿಕೆಯನ್ನ ಈ ವರ್ಚದ ಭವಿಷ್ಯವಾಣಿ ಎಂದು ಜನ ನಂಬಿಕೆ. ಈ ಕಾರ್ಣಿಕದ ಮೇಲೆ ರೈತರು ವರ್ಷದ ಮಳೆ, ಬೆಳೆ ನಿರೀಕ್ಷಿಸುತ್ತಾರೆ.