ತುಮಕೂರು: ಕ್ಯಾಬ್ ಚಾಲಕನಿಂದ ಪೋನ್ ಪೇ ಮೂಲಕ ಲಂಚ ಪಡೆದ ಆರೋಪದ ಮೇಲೆ ಗುಬ್ಬಿ ಪಿಎಸ್ಐ ಜ್ಞಾನಮೂರ್ತಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಮ್ಯಾಕ್ಸಿಕ್ಯಾಬ್ ತಡೆದು ಕಿರುಕುಳ ನೀಡಿ, ಚಾಲಕನಿಂದ 7 ಸಾವಿರ ಹಣವನ್ನು ಫೋನ್ ಪೇ ಮೂಲಕ ಪಡೆದಿದ್ದರು. ತಮ್ಮ ಜೀಪ್ ಚಾಲಕ ಕರಿಯಪ್ಪ ಅವರ ನಂಬರ್ ಗೆ ಫೋನ್ ಪೇ ಮಾಡಿಸಿಕೊಂಡ ಆರೋಪ ಪಿಎಸ್ಐ ಜ್ಞಾನಮೂರ್ತಿ ಎದುರಿಸುತ್ತಿದ್ದರು. ಪಿಎಸ್ಐ ಕ್ರಮ ಖಂಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಮಾಹಿತಿ ಪಡೆದ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಾಪುರ್, ಪಿಎಸ್ಐ ಜ್ಞಾನಮೂರ್ತಿ ಯನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.



