Connect with us

Dvgsuddi Kannada | online news portal | Kannada news online

ಎಸ್ಸೆಸ್ಸೆಲ್ಸಿ ಫಲಿತಾಂಶ; ಶೇ.66.1 ರಷ್ಟು ವಿದ್ಯಾರ್ಥಿಗಳು ಪಾಸ್; ದಕ್ಷಿಣ ಕನ್ನಡ ಫಸ್ಟ್ – ಕಲಬುರ್ಗಿ ಲಾಸ್ಟ್ ; ದಾವಣಗೆರೆಗೆ ಎಷ್ಟನೇ ಸ್ಥಾನ…?

sslc result 1

ಪ್ರಮುಖ ಸುದ್ದಿ

ಎಸ್ಸೆಸ್ಸೆಲ್ಸಿ ಫಲಿತಾಂಶ; ಶೇ.66.1 ರಷ್ಟು ವಿದ್ಯಾರ್ಥಿಗಳು ಪಾಸ್; ದಕ್ಷಿಣ ಕನ್ನಡ ಫಸ್ಟ್ – ಕಲಬುರ್ಗಿ ಲಾಸ್ಟ್ ; ದಾವಣಗೆರೆಗೆ ಎಷ್ಟನೇ ಸ್ಥಾನ…?

ಬೆಂಗಳೂರು: 2024-2025ನೇ ಸಾಲಿನ ಎಸ್ ಎಸ್‌ ಎಲ್ ಸಿ ಪರೀಕ್ಷೆ 1ರ ಫಲಿತಾಂಶವನ್ನು ಶಿಕ್ಷಣಸಚಿವ ಮಧು ಬಂಗಾರಪ್ಪ  ಘೋಷಿಸಿದ್ದು, ಈ ಬಾರಿ ಶೇ.66.1ರಷ್ಟು ಫಲಿತಾಂಶ ದಾಖಲಾಗಿದೆ. ಈ ಬಾರಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಶೇ.74ರಷ್ಟು ವಿದ್ಯಾರ್ಥಿನಿಯರು (ಬಾಲಕಿ) ತೇರ್ಗಡೆಯಾಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಶೇ.8ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಫಲಿತಾಂಶದಲ್ಲಿ ಶೇ.58.07ರಷ್ಟು ವಿದ್ಯಾರ್ಥಿಗಳು (ಬಾಲಕರು) ಉತ್ತೀರ್ಣರಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ(ಶೇ.91.12), ಉಡುಪಿ ದ್ವಿತೀಯ(ಶೇ.89.96) ಹಾಗೂ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ, ಕಲಬುರಗಿ ಕೊನೆಯ ಸ್ಥಾನ ಪಡೆದಿದೆ. ಶೇ. 66.09 ರಷ್ಟು ಫಲಿತಾಂಶದೊಂದಿಗೆ ದಾವಣಗೆರೆ 21 ಸ್ಥಾನ ಪಡೆದಿದೆ.

ದಾವಣಗೆರೆಯಲ್ಲಿ ತೀವ್ರ ಕುಸಿತ

ವಣಗೆರೆಯಲ್ಲಿ ಜಿಲ್ಲೆಯಲ್ಲಿ 19,964 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 13,195 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಶೇ 66.09ರಷ್ಟು ಫಲಿತಾಂಶ ಪಡೆದಿದೆ.ಕಳೆದ ವರ್ಷ ಜಿಲ್ಲೆಯು ಶೇ. 74.28 ರಷ್ಟು ಫಲಿತಾಂಶ ಪಡೆಯುವ‌ ಮೂಲಕ 23ನೇ ಸ್ಥಾನ ಪಡೆದಿತ್ತು.

ಜಿಲ್ಲೆವಾರು ಫಲಿತಾಂಶ

ದಕ್ಷಿಣ ಕನ್ನಡ – ಶೇ. 91.12
ಉಡುಪಿ – ಶೇ. 89.96
ಉತ್ತರ ಕನ್ನಡ – ಶೇ. 83.19
ಶಿವಮೊಗ್ಗ – ಶೇ. 82.29
ಕೊಡಗು – ಶೇ. 82.21
ಹಾಸನ – ಶೇ. 82.12
ಶಿರಸಿ – ಶೇ. 80.47
ಚಿಕ್ಕಮಗಳೂರು – ಶೇ. 77.9
ಬೆಂಗಳೂರು ನಗರ – ಶೇ. 74.02
ಬೆಂಗಳೂರು ದಕ್ಷಿಣ – ಶೇ. 72.3
ಬೆಂಗಳೂರು ಉತ್ತರ – ಶೇ. 72.27
ಮಂಡ್ಯ – ಶೇ. 69.27
ಹಾವೇರಿ – ಶೇ. 69.03
ಕೋಲಾರ – ಶೇ. 68.47
ಮೈಸೂರು – ಶೇ. 68.39
ಬಾಗಲಕೋಟೆ – ಶೇ. 68.29
ಗದಗ – ಶೇ. 67.72
ಧಾರವಾಡ – ಶೇ. 67.62
ವಿಜಯನಗರ – ಶೇ. 67.62
ತುಮಕೂರು – ಶೇ. 67.03
ದಾವಣಗೆರೆ – ಶೇ. 66.09
ಚಿಕ್ಕಬಳ್ಳಾಪುರ – ಶೇ. 63.64
ಚಿತ್ರದುರ್ಗ – ಶೇ. 63. 21
ರಾಮನಗರ – ಶೇ. 63.12
ಬೆಳಗಾವಿ – ಶೇ. 62.16
ಚಿಕ್ಕೋಡಿ – ಶೇ. 62. 12
ಚಾಮರಾಜನಗರ – ಶೇ. 61.45
ಮಧುಗಿರಿ – ಶೇ. 60.65
ಬಳ್ಳಾರಿ – ಶೇ. 60.26
ಕೊಪ್ಪಳ – ಶೇ. 57.32
ಬೀದರ್ – ಶೇ. 52.25
ರಾಯಚೂರು – ಶೇ. 52.05
ಯಾದಗಿರಿ – ಶೇ. 51.6
ವಿಜಯಪುರ – ಶೇ. 49.58
ಕಲಬುರ್ಗಿ – ಶೇ. 42.43

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top