ಬೆಂಗಳೂರು: ಭರ್ಜರಿ ಜಯದೊಂದಿಗೆ ಸರ್ಕಾರ ರಚಿಸಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ಸಂಪುಟ ವಿಸ್ತರಣೆ ಮಾಡಿದೆ. ಇಂದು ಎರಡನೇ ಹಂತದಲ್ಲಿ 24 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಇದಕ್ಕೂ ಮೊದಲು 8 ಸಚಿವರು ಪ್ರಮಾಣ ವಚನ ಸ್ವೀಕರಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಒಟ್ಟು 34 ಜನರ ಸರ್ಕಾರದ ಸಂಪುಟ ಸೇರಿದ್ದಾರೆ.
224 ವಿಧಾನಸಭಾ ಕ್ಷೇತ್ರಗಳಲ್ಲಿ 136 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಯಾವ ಸಚಿವರಿಗೆ ಯಾವ ಸಚಿವ ಸ್ಥಾನ ನೀಡಲಾಗಿದೆ ಎಂಬುದರ ವಿವರ ಇಲ್ಲಿದೆ
- ನೂತನ ಸಚಿವರಿಗೆ ಖಾತೆ
- 1.ಮುಖ್ಯಮಂತ್ರಿ ಸಿದ್ದರಾಮಯ್ಯ- ಹಣಕಾಸು, ಆಡಳಿತ ಸುಧಾರಣೆ, ವಾರ್ತಾ ಇಲಾಖೆ ಮತ್ತು ಹಂಚಿಕೆ ಮಾಡದ ಇತರ ಇಲಾಖೆಗಳು
- 2.ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್- ಜಲಸಂಪನ್ಮೂಲ, ಬೆಂಗಳೂರು ಉಸ್ತುವಾರಿ
- 3.ಡಾ.ಜಿ.ಪರಮೇಶ್ವರ್- ಗೃಹ ಇಲಾಖೆ
- 4.ಹೆಚ್.ಕೆ.ಪಾಟೀಲ್-ಕಾನೂನು ಸಂಸದೀಯ ಇಲಾಖೆ
- 5.ಕೆ.ಹೆಚ್.ಮುನಿಯಪ್ಪ-ಆಹಾರ ಇಲಾಖೆ
- 6.ಕೆ.ಜೆ.ಜಾರ್ಜ್-ಇಂಧನ ಇಲಾಖೆ
- 7.ಎಂ.ಬಿ.ಪಾಟೀಲ್-ಬೃಹತ್ ಕೈಗಾರಿಕೆ ಇಲಾಖೆ, ಐಟಿ, ಬಿಟಿ
- 8.ರಾಮಲಿಂಗಾರೆಡ್ಡಿ- ಸಾರಿಗೆ ಇಲಾಖೆ
- 9.ಸತೀಶ್ ಜಾರಕಿಹೊಳಿ-ಲೋಕೋಪಯೋಗಿ ಇಲಾಖೆ
- 10.ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ
- 11.ಜಮೀರ್ ಅಹ್ಮದ್- ವಸತಿ,ವಕ್ಫ್ ಇಲಾಖೆ
- 12.ಕೃಷ್ಣಬೈರೇಗೌಡ- ಕಂದಾಯ ಇಲಾಖೆ
- 13.ದಿನೇಶ್ ಗುಂಡೂರಾವ್-ಆರೋಗ್ಯ ಕುಟುಂಬ ಕಲ್ಯಾಣ
- 14.ಚೆಲುವರಾಯಸ್ವಾಮಿ- ಕೃಷಿ ಇಲಾಖೆ
- 15.ಕೆ.ವೆಂಕಟೇಶ್-ಪಶುಸಂಗೋಪನಾ ಇಲಾಖೆ
- 16.ಹೆಚ್.ಸಿ.ಮಹದೇವಪ್ಪ- ಸಮಾಜಕಲ್ಯಾಣ ಇಲಾಖೆ
- 17.ಈಶ್ವರ್ ಖಂಡ್ರೆ- ಅರಣ್ಯ ಮತ್ತು ಪರಿಸರ ಇಲಾಖೆ
- 18.ಕೆ.ಎನ್.ರಾಜಣ್ಣ- ಸಹಕಾರ ಇಲಾಖೆ
- 19.ಶರಣಬಸಪ್ಪ ದರ್ಶನಾಪೂರ- ಸಣ್ಣ ಕೈಗಾರಿಕೆ ಇಲಾಖೆ
- 20.ಶಿವಾನಂದ ಪಾಟೀಲ್- ಜವಳಿ, ಸಕ್ಕರೆ ಖಾತೆ
- 21.ಆರ್.ಬಿ.ತಿಮ್ಮಾಪೂರ- ಅಬಕಾರಿ ಇಲಾಖೆ, ಮುಜರಾಯಿ
- 22.ಎಸ್.ಎಸ್.ಮಲ್ಲಿಕಾರ್ಜುನ್- ಗಣಿಮತ್ತು ಭೂ ವಿಜ್ಙಾನ ಇಲಾಖೆ
- 23.ಶಿವರಾಜ್ ತಂಗಡಗಿ-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
- 24.ಶರಣ ಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ ಇಲಾಖೆ
- 25.ಮಂಕಾಳ ವೈದ್ಯ- ಮೀನುಗಾರಿಕೆ ಬಂದರು ಇಲಾಖೆ
- 26.ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
- 27.ರಹೀಂಖಾನ್- ಪೌರಾಡಳಿತ ಇಲಾಖೆ
- 28.ಡಿ.ಸುಧಾಕರ್- ಮೂಲಸೌಕರ್ಯ,ಸಾಂಖ್ಯಿಕ ಇಲಾಖೆ
- 29.ಸಂತೋಷ್ ಲಾಡ್- ಕಾರ್ಮಿಕ ಕಲ್ಯಾಣ ಇಲಾಖೆ
- 30.ಎನ್.ಎಸ್.ಬೋಸರಾಜು-ಪ್ರವಾಸೋದ್ಯಮ ಇಲಾಖೆ
- 31.ಬೈರತಿ ಸುರೇಶ್- ನಗರಾಭಿವೃದ್ಧಿ ಇಲಾಖೆ
- 32.ಮಧು ಬಂಗಾರಪ್ಪ- ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ
- 33.ಎಂ.ಸಿ.ಸುಧಾಕರ್- ವೈದ್ಯಕೀಯ ಶಿಕ್ಷಣ ಇಲಾಖೆ
- 34.ಬಿ.ನಾಗೇಂದ್ರ- ಯುವಜನ ಕ್ರೀಡೆ ಇಲಾಖೆ



