Connect with us

Dvgsuddi Kannada | online news portal | Kannada news online

ಜ.3ರಿಂದ 9ರವರೆಗೆ ಉಚಿತ ಕೃತಕ ಕೈಕಾಲು ಜೋಡಣೆ ಬೃಹತ್ ಶಿಬಿರ

IMG 20221218 180416

ದಾವಣಗೆರೆ

ಜ.3ರಿಂದ 9ರವರೆಗೆ ಉಚಿತ ಕೃತಕ ಕೈಕಾಲು ಜೋಡಣೆ ಬೃಹತ್ ಶಿಬಿರ

ದಾವಣಗೆರೆ: ಜೈಪುರ ಶ್ರೀಭಗವಾನ್ ಮಹಾವೀರ ವಿಕಲಾಂಗ ಸಹಾಯತ ಸಮಿತಿ ಹಾಗೂ ಬೆಂಗಳೂರು ರೋಟರಿ ವತಿಯಿಂದ ಜನವರಿ 03 ರಿಂದ 09 ರವರೆಗೆ ಬೆಂಗಳೂರಿನಲ್ಲಿ ಕೃತಕ ಕಾಲು ಹಾಗೂ ಮುಂಗೈ ಬೃಹತ್ ಶಿಬಿರ ಆಯೋಜಿಸಲಾಗಿರುತ್ತದೆ.

ಮುಂಗೈ/ಕೃತಕ ಕಾಲುಗಳು, ಪೋಲೀಯೋ ಪೀಡಿತರಿಗಾಗಿ ಕ್ಯಾಲಿಪರ್ಸ್‍ಗಳನ್ನು ಉಚಿತವಾಗಿ ನೀಡಲಾಗುವುದು. ಶಿಬಿರಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟ ಸಹ ಶಿಬಿರದಲ್ಲಿ ನೀಡಲಾಗುವುದು. ಅವಶ್ಯವಿರುವ ವಿಕಲಚೇತನರು ಕಡ್ಡಾಯವಾಗಿ ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಯೊಂದಿಗೆ ಗಣೇಶ ಬಾಗ್, ಶ್ರೀ ಎಸ್.ಎಸ್.ಬಿ.ಎಸ್. ಜೈನ್ ಸಂಘ ಟ್ರಸ್ಟ್ (ರಿ.), ನಂ.9, ಭಗವಾನ್ ಮಹಾವೀರ್ ರಸ್ತೆ(ಇನ್‍ಫೆಂಟ್ರಿ ರಸ್ತೆ), ಶಿವಾಜಿನಗರ, ಬೆಂಗಳೂರು-1, (ಶಿವಾಜಿನಗರ ಬಸ್ ನಿಲ್ದಾಣದ ಹತ್ತಿರ) ಈ ವಿಳಾಸದಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಗಿರೀಶ್ – 9880112800, ಮಧುಸೂದನ್ – 9731525183 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಕೆ.ಕೆ.ಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top