Connect with us

Dvgsuddi Kannada | online news portal | Kannada news online

ಜೂನ್ 11ರಿಂದಲೇ ಎಲ್ಲ ಮಹಿಳೆರಿಗೆ ಸರ್ಕಾರಿ ಬಸ್ ಫ್ರೀ; 200 ಯೂನಿಟ್ ಉಚಿತ; ಜುಲೈನಿಂದ ಪ್ರತಿಯೊಬ್ಬರಿಗೆ 10 ಕೆಜಿ ಆಹಾರ ಧಾನ್ಯ; ಆಗಸ್ಟ್ 15ರಿಂದ ಮನೆ ಒಡತಿಗೆ 2 ಸಾವಿರ ; ಸಿಎಂ ಮಹತ್ವದ ಘೋಷಣೆ

ಪ್ರಮುಖ ಸುದ್ದಿ

ಜೂನ್ 11ರಿಂದಲೇ ಎಲ್ಲ ಮಹಿಳೆರಿಗೆ ಸರ್ಕಾರಿ ಬಸ್ ಫ್ರೀ; 200 ಯೂನಿಟ್ ಉಚಿತ; ಜುಲೈನಿಂದ ಪ್ರತಿಯೊಬ್ಬರಿಗೆ 10 ಕೆಜಿ ಆಹಾರ ಧಾನ್ಯ; ಆಗಸ್ಟ್ 15ರಿಂದ ಮನೆ ಒಡತಿಗೆ 2 ಸಾವಿರ ; ಸಿಎಂ ಮಹತ್ವದ ಘೋಷಣೆ

ಬೆಂಗಳೂರು; 5 ಗ್ಯಾರಂಟಿ ಯೋಜನೆ ಜಾರಿ ಕುರಿತು ಇಂದು ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದು, ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲಾ ಘೋಷಣೆಗಳನ್ನು ಈ ಅರ್ಥಿಕ ವರ್ಷದಲ್ಲಿಯೇ ಜಾರಿಗೊಳಿಸುವುದಾಗ ಘೋಷಿಸಿದ್ದಾರೆ.

ಈ ಬಗ್ಗೆ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಜೂನ್ 11ರಿಂದಲೇ ಎಲ್ಲ ಮಹಿಳೆರಿಗೆ ಸರ್ಕಾರಿ ಬಸ್ ಪ್ರಯಾಣ ಫ್ರೀ,  200 ಯೂನಿಟ್ ಉಚಿತ, ಜುಲೈನಿಂದ ಬಿಪಿಎಲ್,ಅಂತ್ಯೋದಯ‌ ಕಾರ್ಡ್ ನ ಪ್ರತಿಯೊಬ್ಬರಿಗೆ 10 ಕೆಜಿ ಆಹಾರ ಧಾನ್ಯ ನೀಡುವುದು ಹಾಗೂ ಆಗಸ್ಟ್ 15ರಿಂದ ಮನೆ ಒಡತಿಗೆ 2 ಸಾವಿರ. ಇದಲ್ಲದೇ ಯುವ‌ನಿಧಿಯಡಿ ವಿದ್ಯಾರ್ಥಿಗಳಿಗೆ ನಿರುದ್ಯೋಗ ಭತ್ಯೆ ನೀಡಲಾಗುವು ಎಂದು ಘೋಷಣೆ ಮಾಡಿದ್ದಾರೆ.

ಗೃಹ ಜ್ಯೋತಿ ಯೋಜನೆಯಡಿ 12 ತಿಂಗಳ ಸರಾಸರಿ ಪಡೆದುಕೊಂಡು, ಅದರ ಮೇಲೆ 200 ಯೂನಿಟ್‌ ವರೆಗೆ ವಿದ್ಯುತ್‌ ಉಚಿತ ನೀಡಲಾಗುವುದು.  ಸರಾಸರಿ ನಂತರ ಶೇ 10 ರಷ್ಟು ವಿದ್ಯುತ್‌ ಉಚಿತ ನೀಡಲಾಗುವುದು.ಈ ಹಿಂದಿನ ಹಳೇ ವಿದ್ಯುತ್‌ ಬಾಕಿಯನ್ನು ಗ್ರಾಹಕರೇ ಪಾವತಿ ಮಾಡಬೇಕು ಎಂದರು.

ಈ ಯೋಜನೆ ಜಾರಿಗೆ ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿ.ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದರು.ಜೂನ್ 11ರಿಂದಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಜೂನ್ 11ರಿಂದ ಶಕ್ತಿ ಯೋಜನೆ ಜಾರಿ ಮಾಡಲಾಗುವುದು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ. ರಾಜ್ಯದ ಎಲ್ಲೇ ಪ್ರಯಾಣ ಬೆಳೆಸುದರೂ ಮಹಿಳೆಯರಿಗೆ ಉಚಿತ‌ ಎಸಿ, ಸ್ಲೀಪರ್, ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಅನ್ವಯವಾಗುವುದಿಲ್ಲ ಎಂದರು

ಮನೆ ಒಡತಿಗೆ ನೀಡುವ 2 ಸಾವಿರದ ಗೃಹಲಕ್ಷ್ಮೀ ಯೋಜನೆ ಘೋಷಣೆ ಆಗಸ್ಟ್‌ 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ. ಈ ಯೋಜನೆಗೆ ನೋಂದಾಯಿಸಲು 1 ತಿಂಗಳ ಕಾಲಾವಕಾಶ. ಆಧಾರ್‌, ಬ್ಯಾಂಕ್‌ ಪಾಸ್‌ಬುಕ್‌ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದು.ಎಪಿಎಲ್‌, ಬಿಪಿಎಲ್‌ ವ್ಯತ್ಯಾಸ ಇಲ್ಲದೆ, ಮನೆಯ ಯಜಮಾನಿಗೆ ಮಾಸಿಕ ₹2000 ನೀಡಲಾಗುವುದು. ಯೋಜನೆಯ ಲಾಭ ಪಡೆಯಲು ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯ. ಎಲ್ಲಾ ರೀತಿಯ ಮಾಸಾಶನ (ಅಂಕವಿಕಲರು, ವಿಧವೆಯರು, ಹಿರಿಯ ನಾಗರಿಕರು) ಪಡೆಯುವ ಮನೆಯೊಡತಿಗೂ ಯೋಜನೆ ಅನ್ವಯ.

ಅನ್ನ ಭಾಗ್ಯ ಯೋಜನೆಯಡಿ BPL ಮತ್ತು ಅಂತ್ಯೋದಯ ಕುಟುಂಬಗಳಿಗೆ ಮಾಸಿಕ 10 ಕೆ.ಜಿ ಆಹಾರ ಧಾನ್ಯ ನೀಡಲಾಗುವು. ಈ ಯೋಜನೆ ಜುಲೈ ತಿಂಗಳಿಂದ ಪ್ರಾರಂಭವಾಗಲಿದೆ ಎಂದರು. ಇನ್ನೂ ಯುವ ನಿಧಿ ಯೋಜನೆ ನೋಂದಣಿ ಮಾಡಿಕೊಂಡ ಪದವಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 24 ತಿಂಗಳು ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ತಿಳಿಸಿದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top