Connect with us

Dvgsuddi Kannada | online news portal | Kannada news online

ಸರ್ಕಾರ ಮಠಗಳ 65 ಶಿಕ್ಷಣ ಸಂಸ್ಥೆಗಳಿಗೆ 119 ಕೋಟಿ ಮಂಜೂರು‌; ಯಾವ ಮಠಕ್ಕೆ ಎಷ್ಟು ಕೋಟಿ..?

ಪ್ರಮುಖ ಸುದ್ದಿ

ಸರ್ಕಾರ ಮಠಗಳ 65 ಶಿಕ್ಷಣ ಸಂಸ್ಥೆಗಳಿಗೆ 119 ಕೋಟಿ ಮಂಜೂರು‌; ಯಾವ ಮಠಕ್ಕೆ ಎಷ್ಟು ಕೋಟಿ..?

ಬೆಂಗಳೂರು: ಹಿಂದುಳಿದ ಮಠಾಧೀಶರ ಒಕ್ಕೂಟ ಮನವಿಗೆ ಸ್ಪಂದಿಸಿದ ಸರ್ಕಾರ ಭರ್ಜರಿ ಅನುದಾನ ನೀಡಿದೆ. ಹಿಂದುಳಿದ/ದಲಿತ ಸಮಾಜದ ವಿವಿಧ ಮಠಗಳ ಶಿಕ್ಷಣ ಸಂಸ್ಥೆಗಳ ಜೀರ್ಣೋದ್ಧಾರ ಹಾಗೂ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯದ 65 ಮಠಗಳ ಶಿಕ್ಷಣ ಸಂಸ್ಥೆಗಳಿಗೆ ಒಟ್ಟು 119 ಕೋಟಿ ರೂ.ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ.

ಬಜೆಟ್​​ಗೂ ಮುನ್ನ ಹಿಂದುಳಿದ ಸಮುದಾಯ ಮತ್ತು ದಲಿತ ವರ್ಗದ ಮಠಾಧೀಶರ ಒಕ್ಕೂಟದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅನುದಾನ ನೀಡುವಂತೆ ಮಾಡಿದ್ದ ಮನವಿಗೆ ಸರ್ಕಾರ ಸ್ಪಂದಿಸಿ, ಅನುದಾನ ಬಿಡುಗಡೆ ಮಾಡಲಾಗಿದೆ.

ಮನವಿ ಪರಿಗಣಿಸಿದ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿತ್ತು. ಇದೀಗ ಕಾಗಿನೆಲೆ ಮಹಾಸಂಸ್ಥಾನ, ಮಾದಾರ ಚನ್ನಯ್ಯ ಗುರಪೀಠ ಟ್ರಸ್ಟ್, ವಾಲ್ಮೀಕಿ ಗುರುಪೀಠ ಸೇರಿದಂತೆ 65 ಮಠಗಳ ಶಿಕ್ಷಣ ಸಂಸ್ಥೆಗಳಿಗೆ ಒಟ್ಟು 119 ಕೋಟಿ ರೂ. ಅನುದಾನ ನೀಡಿ ಆದೇಶ ಹೊರಡಿಸಲಾಗಿದೆ. ಈ ಕುರಿತಂತೆ ಸಿಎಂ ಕಚೇರಿಯಿಂದ ಟ್ವೀಟ್​ ಮಾಡಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಈ ಅನುದಾನ ನೀಡಲಾಗುವುದು. ಹಿಂದುಳಿದ/ದಲಿತ ಸಮುದಾಯದ ವಿವಿಧ ಮಠಗಳ ಶಿಕ್ಷಣ ಸಂಸ್ಥೆಗಳ ಜೀರ್ಣೋದ್ಧಾರ ಮತ್ತು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುದಾವನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆರ್ಥಿಕ ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದೆ. ಈ ಕೆಳಕಂಡಂತೆ ಅನುದಾನ ನೀಡಲಾಗಿದೆ.

ಕಾಗಿನೆಲೆ ಮಹಾಸಂಸ್ಥಾನ, ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಮಹಾಸಂಸ್ಥಾನ ಮಠ, ಶಿವಶರಣ ಶ್ರೀ ಮಾದಾರ ಚನ್ನಯ್ಯ ಗುರುಪೀಠ, ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠ, ವಾಲ್ಮೀಕಿ ಗುರುಪೀಠಗಳಿಗೆ ತಲಾ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮಾಚಿದೇವ ಮಹಾಸಂಸ್ಥಾನ ಮಠ, ಯಾದವ ಮಹಾಸಂಸ್ಥಾನ ಮಠ, ಹಡಪದ ಅಪ್ಪಣ್ಣ ಗುರುಪೀಠ, ಕುಂಬಾರ ಗುರುಪೀಠ, ಶ್ರೀ ನಾರಾಯಣ ಗುರು ಮಹಾಸಂಸ್ಥಾನ, ಶ್ರೀ ಮಹಾಲಕ್ಷ್ಮಿ ತಿಗಳರ ಮಹಾಸಂಸ್ಥಾನ ಟ್ರಸ್ಟ್, ಭಗವದ್ ರಾಮಾನುಜ ಟ್ರಸ್ಟ್, ನಿಕೇತನ ಎಜುಕೇಷನ್ ಟ್ರಸ್ಟ್, ಆನಂದಮಯ ಟ್ರಸ್ಟ್‌ಗೆ ತಲಾ 3 ಕೋಟಿ ರೂ. ನೀಡಲಾಗಿದೆ.

ಕಾಗಿನೆಲೆ ಮಹಾಸಂಸ್ಥಾನದ ಶಾಖಾಮಠ, ವನಶ್ರೀ ಜಯದೇವ ಟ್ರಸ್ಟ್, ಛಲವಾದಿ ಗುರುಪೀಠ, ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ, ಮೇದಾರ ಕೇತೇಶ್ವರ ಮಠ, ಎಸ್.ಜೆ.ಎಸ್.ಮಹಾಸಂಸ್ಥಾನ, ಮುದ್ಗರ ಟ್ರಸ್ಟ್, ಶಿವಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿ ಟ್ರಸ್ಟ್, ಹೇಮವೇಮ ಸದ್ದಾವನ ಪೀಠಕ್ಕೆ ತಲಾ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠ, ಬೃಂಗೇಶ್ವರ ಮಠ, ಸಿದ್ದಶ್ರೀ ಸಂಸ್ಥೆ, ಸವಿತಾ ಪೀಠ, ಸರೂರ ಮಹಾಸಂಸ್ಥಾನ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಗುರುಪೀಠ ಟ್ರಸ್ಟ್, ಅಮೋಘ ಸಿದ್ದೇಶ್ವರ ಮಠ ಟ್ರಸ್ಟ್, ಗುರು ಸೋಮೇಶ್ವರ ಪ್ರತಿಷ್ಠಾನ, ಅದಿಶಕ್ತಿ ಮಹಾಸಂಸ್ಥಾನ ಮಠ, ಮಹಿಳಾ ಮಠಾಧೀಶರ ಸಂಸತ್, ಜಗದ್ಗುರು ಗೌಳಿ ಗುರುಪೀಠ ಮಹಾಸಂಸ್ಥಾನ ಮಠ, ಸದ್ಗುರು ಪರಮಹಂಸ ವಿದ್ಯಾವರೇಣ್ಯ ಯೋಗೇಶ್ವರ ಪಾರಮಾರ್ಥ ವಿಶ್ವಸ್ಥ ಧಾರ್ಮಿಕ ಟ್ರಸ್ಟ್ ಸೇರಿದಂತೆ ಇತರೆ ಮಠಗಳ ಶಿಕ್ಷಣ ಸಂಸ್ಥೆಗಳಿಗೆ ತಲಾ ಒಂದು ಕೋಟಿ ರೂ. ನೀಡಿ ಸರ್ಕಾರ ಆದೇಶಿಸಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • ಪ್ರಮುಖ ಸುದ್ದಿ

    ಶನಿವಾರ ರಾಶಿ ಭವಿಷ್ಯ 18 ಜನವರಿ 2025

    By

    ಈ ರಾಶಿಯವರಿಗೆ ಶಶಿ ಮಂಗಳ ಯೋಗದಿಂದ ಗುಡ್ ನ್ಯೂಸ್, ಶನಿವಾರ ರಾಶಿ ಭವಿಷ್ಯ 18 ಜನವರಿ 2025 – ಸೂರ್ಯೋದಯ –...

  • ಪ್ರಮುಖ ಸುದ್ದಿ

    ಕಂಕಣಬಲ ಕೂಡಿ ಬರಲು ಏನು ಮಾಡಬೇಕು..?

    By

    ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು)...

  • ಪ್ರಮುಖ ಸುದ್ದಿ

    ಶುಕ್ರವಾರದ ರಾಶಿ ಭವಿಷ್ಯ 17 ಜನವರಿ 2025

    By

    ಈ ರಾಶಿಯವರು ಭೂ ವ್ಯವಹಾರಗಳಿಗೆ ಹೂಡಿಕೆ ಮಾಡುವರು, ಈ ರಾಶಿಯವರ ಅಧಿಕಾರಿಗಳು ಕಾರ್ಯ ಕ್ಷೇತ್ರದಲ್ಲಿ ಅಡ್ಡಿ ಆತಂಕಗಳೇ ಹೆಚ್ಚು, ಶುಕ್ರವಾರದ ರಾಶಿ...

  • ಪ್ರಮುಖ ಸುದ್ದಿ

    ರಾಶಿ ಭವಿಷ್ಯ ಗುರುವಾರ 16 ಜನವರಿ 2025

    By

    ಈ ರಾಶಿಯ ಗುತ್ತಿಗೆದಾರ ವ್ಯವಹಾರಸ್ತರಿಗೆ ಹಾಗೂ ಮಧ್ಯವರ್ತಿಗಳಿಗೆ ಧನ ಆಗಮನ, ಈ ರಾಶಿಯ ಅವಿವಾಹಿತರಿಗೆ ಮದುವೆ ಯೋಗ, ರಾಶಿ ಭವಿಷ್ಯ ಗುರುವಾರ...

  • ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

To Top