Connect with us

Dvgsuddi Kannada | online news portal | Kannada news online

ಇಂದು ಮಧ್ಯಾಹ್ನ 2.30ಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ಪರವಾಗಿ ವಕೀಲ ಜಗದೀಶ್ ದೂರು

ಪ್ರಮುಖ ಸುದ್ದಿ

ಇಂದು ಮಧ್ಯಾಹ್ನ 2.30ಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ಪರವಾಗಿ ವಕೀಲ ಜಗದೀಶ್ ದೂರು

ಬೆಂಗಳೂರು: ಸಿಡಿ ಪ್ರಕರಣದ ಯುವತಿ ಪರವಾಗಿ ಮಾಜಿ ಸಚಿವ ರಮೇಶ್ ಜಾರಿಕಿಹೊಳಿ ವಿರುದ್ಧ ಇಂದು  ಪೊಲೀಸ್ ಕಮಿಷನರ್ ಗೆ  ದೂರು ದಾಖಲಾಗಲಿದೆ.  ಮಧ್ಯಾಹ್ನ 2.30ಕ್ಕೆ ಯುವತಿ ಪರವಾಗಿ ವಕೀಲ ಜಗದೀಶ್ ದೂರು ನೀಡಲಿದ್ದಾರೆ.

ಇಂದು ಮೂರನೇ ವಿಡಿಯೋ ಬಿಡುಗಡೆ ಮಾಡಿದ ಯುವತಿ, ನಾನು ಇಷ್ಟು ದಿನ ಭಯದಲ್ಲಿದ್ದೆ, ಈಗ ನನಗೆ ಧೈರ್ಯ ಬಂದಿದೆ. ಹೀಗಾಗಿ ನಮ್ಮ ವಕೀಲರಾದ ಜಗದೀಶ್ ಅವರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ಧೇನೆ ಎಂದು ಹೇಳಿಕೊಂಡಿದ್ದಾಳೆ.ನಮ್ಮ ತಂದೆ-ತಾಯಿ ಆರ್ಶೀವಾದ, ರಾಜ್ಯ ಎಲ್ಲ ಪಕ್ಷ ಮತ್ತು ಸಂಘಟನೆಗಳ ಬೆಂಬಲದಿಂದ ದೂರು ನೀಡಲು ಮುಂದೆ ಬಂದಿದ್ದೇನೆ. ವಕೀಲ ಜಗದೀಶ್  ಅವರು ದೂರು ನೀಡುತ್ತಾರೆ ಎಂದು ಹೇಳಿದ್ಧಾರೆ.

ಈ ಪ್ರಕಣರದಲ್ಲಿ ನಾನು ಸ್ವತಃ ದೂರು ನೀಡುತ್ತಿಲ್ಲ. ಯುವತಿ ರಕ್ಷಣೆಗಾಗಿ ಕೇಳಿಕೊಂಡಿದ್ದರು. ನಾವು ಕೂಡ ರಕ್ಷಣೆ ಕೊಡುವುದಾಗಿ ಹೇಳಿದ್ದೇವು. ಹೀಗಾಗಿ ನನ್ನ ಮೂಲಕ ಯುವತಿ ದೂರು ನೀಡುತ್ತಿದ್ದಾಳೆ. ಈ ಪ್ರಕಣದಲ್ಲಿ ನಾನು ದೂರು ನೀಡುತ್ತಿಲ್ಲ. ಯುವತಿ ದೂರನ್ನು ಪೊಲೀಸರಿಗೆ ನೀಡುತ್ತಿದ್ದೇನೆ ಅಷ್ಟೇ ಎಂದು ವಕೀಲ ಜಗದೀಶ್ ಹೇಳಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top