ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಿದೀಗ ಸಿಡಿ ಲೇಡಿ ಎರಡನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ನನಗೆ ನನ್ನ ತಂದೆ, ತಾಯಿ ರಕ್ಷಣೆ ಮುಖ್ಯ. ನಾನು ಯಾವುದೇ ತಪ್ಪೇ ಮಾಡಿಲ್ಲ. ಹೀಗಾಗಿ ನನ್ನ ತಂದೆ-ತಾಯಿ ಸ್ವ ಇಚ್ಚೆಯಿಂದ ದೂರು ನೀಡಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ.
ನನಗೆ ಎಸ್ಐಟಿ ತಂದೆ ತಾಯಿ ಸುರಕ್ಷತೆ ಬಗ್ಗೆ ನನಗೆ ನಂಬಿಕೆ. ರಕ್ಷಣೆ ನಂಬಿಕೆ ಬಂದ ಮೇಲೆ ನಾನು ವಿಚಾರಣೆಗೆ ಬರುತ್ತೇನೆ. ನಂತರ ನಾನು ಏನು ಹೇಳಿಕೆ ನೀಡಬೇಕು ನೀಡುತ್ತೇನೆ. ನನ್ನ ತಂದೆ-ತಾಯಿಗೆ ರಕ್ಷಣೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಹಾಗೂ ಮಹಿಳಾ ಸಂಘಟನೆಗಳು ನಿಲ್ಲುವಂತೆ ಮನವಿ ಮಾಡಿಕೊಂಡಿದ್ದಾಳೆ.
ನಾನು ಮಾರ್ಚ್ 12 ರಂದೇ ಎಸ್ ಐಟಿಗೆ ವಿಡಿಯೋ ಕಳಿಸಿದ್ದೆ. ಆದರೆ ಅದರೆ ನಾನು ವಿಡಿಯೋ ಕಳುಹಿಸಿದ ದಿನ ಬಿಡುಗಡೆಯಾಗಿಲ್ಲ. ಮಾರ್ಚ್ 13 ರಂದು ರಮೇಶ್ ಜಾರಕಿಹೊಳಿ ದೂರು ನೀಡಿದ ಬಳಿಕ ವಿಡಿಯೋ ರಿಲೀಸ್ ಮಾಡಲಾಗಿದೆ. ಹೀಗಾಗಿ ನನಗೆ ಏನಾಗುತ್ತಿದೆ ಅರ್ಥವಾಗುತ್ತಿಲ್ಲ ಎಸ್ ಐಟಿ ಯಾರ ಪರವಾಗಿದ್ದಾರೆ ಎಂಬುದು ಅರ್ಥವಾಗಿಲ್ಲ. ನಮ್ಮ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ



