Connect with us

Dvgsuddi Kannada | online news portal | Kannada news online

ಹೊನ್ನಾಳಿ ಸೇರಿ ರಾಜ್ಯದ 5 ಕಡೆ RTO ಕಚೇರಿ ತೆರೆಯಲು ನಿರ್ಧಾರ: ಲಕ್ಷ್ಮಣ ಸವದಿ

ಪ್ರಮುಖ ಸುದ್ದಿ

ಹೊನ್ನಾಳಿ ಸೇರಿ ರಾಜ್ಯದ 5 ಕಡೆ RTO ಕಚೇರಿ ತೆರೆಯಲು ನಿರ್ಧಾರ: ಲಕ್ಷ್ಮಣ ಸವದಿ

ಬೆಂಗಳೂರು: ದಾವಣಗೆರೆಯ ಹೊನ್ನಾಳಿ ಪಟ್ಟಣ, ಉಡುಪಿ ಜಿಲ್ಲೆಯ ಕುಂದಾಪುರ, ರಾಯಚೂರು ಜಿಲ್ಲೆಯ ಸಿಂಧನೂರು ಅಥವಾ ಲಿಂಗಸುಗೂರು, ವಿಜಯಪುರದ ಇಂಡಿ ಅಥವಾ ಸಿಂಧಗಿ, ವಿಜಯಪುರದ ಮುದ್ದೇಬಿಹಾಳದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ತೆರೆಯಲು ಪ್ರಸ್ತಾವ ಸ್ವೀಕೃತಗೊಂಡಿವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ವಿಧಾನ ಸಭೆ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಶಿವಾನಂದ ಪಾಟೀಲ್‌ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ತೆರೆಯುವ ಸಂಬಂಧ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಆಯುಕ್ತರಿಂದ ಐದು ಪ್ರಸ್ತಾವನೆ ಸ್ವೀಕೃತಗೊಂಡಿವೆ. ಹೊಸ ಕಚೇರಿ ತೆರೆಯಲು ಕನಿಷ್ಠ 50 ಕಿ.ಮೀ. ಅಂತರವಿರಬೇಕು. ಬಸವನ ಬಾಗೇವಾಡಿಯು ಕೇವಲ 40 ಕಿ.ಮೀ. ಅಂತರದಲ್ಲಿರುವ ಕಾರಣ ಕಚೇರಿ ಆರಂಭಿಸಲಾಗದು ಎಂದು ತಿಳಿಸಿದರು.

ಇದಕ್ಕೂ ಮೊದಲು ಶಿವಾನಂದ ಪಾಟೀಲ್‌, ಬಸವನ ಬಾಗೇವಾಡಿ ತಾಲ್ಲೂಕು ಕೇಂದ್ರದಲ್ಲಿ ಸಹಾಯಕ ಸಾರಿಗೆ ಅಧಿಕಾರಿ ಕಚೇರಿ ಅಗತ್ಯವಿದೆ. ಮುದ್ದೇಬಿಹಾಳ ಬದಲಿಗೆ ಬಸವನ ಬಾಗೇವಾಡಿಯಲ್ಲೇ ಕಚೇರಿ ಆರಂಭಿಸುವುದು ಸೂಕ್ತವಾಗಿದೆ. ಹಾಗಾಗಿ ಮುದ್ದೇಬಿಹಾಳದಲ್ಲಿ ಕಚೇರಿ ತೆರೆಯುವ ಪ್ರಸ್ತಾವ ತಡೆ ಹಿಡಿಯಬೇಕು ಎಂದು ಮನವಿ ಮಾಡಿ

ಲಕ್ಷ್ಮಣ ಸವದಿ ಉತ್ತರಿಸಿ, ಮುದ್ದೇಬಿಹಾಳಕ್ಕೆ ಹಂಚಿಕೆಯಾಗಿರುವ ಕಚೇರಿ ಪ್ರಸ್ತಾವ ತಡೆಹಿಡಿಯುವುದು ಸೂಕ್ತವೆನಿಸದು. ಬಸವನ ಬಾಗೇವಾಡಿಗೆ ಅಗತ್ಯವಿದ್ದರೆ ಕಚೇರಿ ಆರಂಭಿಸುವ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಪ‌ರಿಶೀಲಿಸಲಾಗುವುದು ಎಂದು ಹೇಳಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top