Connect with us

Dvgsuddi Kannada | online news portal | Kannada news online

2025ನೇ ಸಾಲಿನ ಸಾರ್ವತ್ರಿಕ ರಜಾ ದಿನ ಪಟ್ಟಿ ಈ ರೀತಿ ಇದೆ..

2025 holiday 1

ಪ್ರಮುಖ ಸುದ್ದಿ

2025ನೇ ಸಾಲಿನ ಸಾರ್ವತ್ರಿಕ ರಜಾ ದಿನ ಪಟ್ಟಿ ಈ ರೀತಿ ಇದೆ..

ಬೆಂಗಳೂರು:  2025ನೇ ಸಾಲಿನ ಸಾರ್ವತ್ರಿಕ, ಪರಿಮಿತ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.

2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

  • ದಿನಾಂಕ 14-01-2025 ಮಂಗಳವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
  • ದಿನಾಂಕ 26-02-2025 ಬುಧವಾರ – ಮಹಾ ಶಿವರಾತ್ರಿ
  • ದಿನಾಂಕ 31-03-2025 ಸೋಮವಾರ – ಖುತುಬ್ ಎ ರಂಜಾನ್
  • ದಿನಾಂಕ 10-04-2025 ಗುರುವಾರ – ಮಹಾವೀರ ಜಯಂತಿ
  • ದಿನಾಂಕ 14-04-2025 ಸೋಮವಾರ – ಡಾ.ಬಿಆರ್ ಅಂಬೇಡ್ಕರ್ ಜಯಂತಿ
  • ದಿನಾಂಕ 18-04-2025 ಶುಕ್ರವಾರ – ಗುಡ್ ಫ್ರೈಡೆ
  • ದಿನಾಂಕ 30-04-2025 ಬುಧವಾರ – ಬಸವ
  • ಜಯಂತಿ, ಅಕ್ಷಯ ತೃತೀಯ
  • ದಿನಾಂಕ 01-05-2025 ಗುರುವಾರ – ಕಾರ್ಮಿಕ ದಿನಾಚರಣೆ
  • ದಿನಾಂಕ 07-06-2025 ಶನಿವಾರ – ಬಕ್ರೀದ್
  • ದಿನಾಂಕ 15-08-2025 ಶುಕ್ರವಾರ – ಸ್ವಾತಂತ್ರ್ಯ ದಿನಾಚರಣೆ
  • ದಿನಾಂಕ 27-08-2025 ಬುಧವಾರ – ವರಸಿದ್ಧಿ ವಿನಾಯಕ ವ್ರತ
  • ದಿನಾಂಕ 05-09-2025 ಶುಕ್ರವಾರ – ಈದ್ ಮಿಲಾದ್
  • ದಿನಾಂಕ 01-10-2025 ಬುಧವಾರ – ಮಹಾನವಮಿ, ಆಯುಧಪೂಜೆ, ವಿಜಯದಶಮಿ
  • ದಿನಾಂಕ 02-10-2025 ಗುರುವಾರ – ಗಾಂಧಿ ಜಯಂತಿ
  • ದಿನಾಂಕ 07-10-2025 ಮಂಗಳವಾರ – ಮಹರ್ಷಿ ವಾಲ್ಮೀಕಿ ಜಯಂತಿ
  • ದಿನಾಂಕ 20-10-2025 ಸೋಮವಾರ – ನರಕ ಚತುರ್ದಶಿ
  • ದಿನಾಂಕ 22-10-2025 ಬುಧವಾರ – ಬಲಿಪಾಡ್ಯಮಿ, ದೀಪಾವಳಿ
  • ದಿನಾಂಕ 01-11-2025 ಶನಿವಾರ – ಕನ್ನಡ ರಾಜ್ಯೋತ್ಸವ
  • ದಿನಾಂಕ 25-12-2025 ಗುರುವಾರ – ಕ್ರಿಸ್ ಮಸ್

ಸೂಚನೆ:
1.ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (26.01.2025), ಯುಗಾದಿ ಹಬ್ಬ (30.03.2025), ಮೊಹರಂ ಕಡೆ ದಿನ (06.07.2025) ಮತ್ತು ಮಹಾಲಯ ಅಮವಾಸ್ಯೆ (21.09.2025) ಹಾಗೂ ಎರಡನೇ ಶನಿವಾರದಂದು ಬರುವ ಕನಕದಾಸ ಜಯಂತಿ (08.11.2025) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

2. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆಮಾಡತಕ್ಕದ್ದು.

3. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು
ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದದಿವಸ ರಜಾ ಮಂಜೂರು ಮಾಡಬಹುದು.

4.ದಿನಾಂಕ:03.09.2025 (ಬುಧವಾರ) ಕೈಲ್ ಮೂಹೂರ್ತ, ದಿನಾಂಕ:18.10.2025 (ಶನಿವಾರ) ತುಲಾಸಂಕ್ರಮಣ ಹಾಗೂ ದಿನಾಂಕ:05.12.2025 (ಶುಕ್ರವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top