ಉತ್ತಮ ಆರೋಗ್ಯಕ್ಕೆ  ಸಿರಿಧಾನ್ಯ ಎಷ್ಟು ಅವಶ್ಯಕ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ಕೊರೊನಾ ಸಂಕಷ್ಟದಲ್ಲಿ ಇಡೀ ವಿಶ್ವವೇ ನಲುಗಿ ನರಳಾಡುತ್ತಿದೆ. ಈ ಸಮಯದಲ್ಲಿ ಜೀವ ಉಳಿಸಿಕೊಳ್ಳಲು ಏನು ಮಾಡುವುದು ಎಂದು ತಿಳಿಯದೆ ಸಾಕಷ್ಟು ಮಂದಿ ಚಿಂತಾಕ್ರಾಂತರಾಗಿದ್ದಾರೆ. ಕೊರೊನಾ ಸೋಂಕು ಬಂದು ಗುಣವಾದರೂ ಬ್ಲಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಜನರನ್ನು ಆತಂಕಕ್ಕೆದೂಡಿದೆ. ಈ ನಡುವೆ ವೈದ್ಯರು ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವುದು ಸೂಕ್ತ ಎಂದು ಸಲಹೆ ನೀಡುತ್ತಿದ್ದಾರೆ. ಮೆಡಿಕಲ್‌ನಲ್ಲಿ ಸಾಕಷ್ಟು ಪ್ರೋಟಿನ್, ವಿಟಮಿನ್ ಪೌಡರ್‌ಗಳನ್ನು ಬರೆದುಕೊಡ್ತಾರೆ. ಆದರೆ ಈ ಸಮಸ್ಯೆಯನ್ನು ಸಿರಿಧಾನ್ಯಗಳು ಸಮರ್ಥವಾಗಿ ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ

milltes

ಸರ್ವ ರೋಗಕ್ಕೂ ರಾಮಬಾಣ ಸಿರಿಧಾನ್ಯ : ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾಧೆ ಮಾತಿನಂತೆ ದೇಹದಲ್ಲಿ ಶಕ್ತಿ ಇದ್ದರೆ ಎಲ್ಲಾ ರೋಗವನ್ನು ಹೊಡೆದೋಡಿಸಲು ಶಕ್ತವಾಗಿರುತ್ತದೆ. ಆದರೀಗ ಆಧುನಿಕ ಭರಾಟೆಯಲ್ಲಿ ಸಿಲುಕಿರುವ ಆಹಾರ ಕ್ರಮ ಶಕ್ತಿ ಕಳೆದುಕೊಂಡಿದೆ. ಆಹಾರದ ಕಾರಣದಿಂದಲೇ ನಮ್ಮ ಹಿರಿಯರು ನೂರು ವರ್ಷ ಮೀರಿದ ಜೀವನ ನಡೆಸುತ್ತಿದ್ದರು. ಅದಕ್ಕೆ ಪ್ರಮುಖ ಕಾರಣ ಅವರು ಪಾಲಿಸಿಕೊಂಡು ಬಂದಿದ್ದ ಆಹಾರ ಪದ್ದತಿ. ಈಗ ನಾವು ಸಿರಿಧಾನ್ಯ ಎಂದು ಕರೆಯುವ ನವಣೆ, ಸಜ್ಜೆ, ಊದಲು ಸೇರಿದಂತೆ ಬಹುತೇಕ ಸಿರಿಧಾನ್ಯಗಳನ್ನೇ ದಿನನಿತ್ಯದ ಆಹಾರದಲ್ಲಿ ಬಳಸುತಿದ್ರು. ಜೊತೆಗೆ ಏಕದಳ, ದ್ವಿದಳ ಧಾನ್ಯಗಳನ್ನು ಹೇರಳವಾಗಿ ಆಹಾರದಲ್ಲಿ ಬಳಸುತ್ತಿದ್ದರು. ಇದೇ ಕಾರಣದಿಂದ ಶತಕ ಸಮೀಪಿಸಿದರೂ, ದಾಟಿದರೂ ಎಲ್ಲಾ ಕಾಯಿಲೆಗಳು ಇವರಿಂದ ದೂರವೇ ಇರುತ್ತಿದ್ದವು. ಹೀಗಾಗಿ ಇವುಗಳನ್ನು ಸರ್ವ ರೋಗಕ್ಕೂ ರಾಮಬಾಣ ಎನ್ನುತ್ತಿದ್ದರು.

Millets 2

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ..! : ಹಳ್ಳಿಯ ಜನ ಶ್ರಮಿಕರು ಹಾಗಾಗಿ ಗಟ್ಟಿಯಾಗಿ ಇರುತ್ತಾರೆ. ನಗರ ವಾಸಿಗಳು ಆಲಸ್ಯ ಬದುಕಿಗೆ ಹೊಂದಿಕೊಂಡಿರುವ ಕಾರಣ ದೇಹದಲ್ಲಿ ಬೊಜ್ಜು ಬಂದಿರುತ್ತದೆ. ರೋಗ ಜನಿಸುವುದೇ ಆಲಸ್ಯ ಜೀವನದ ಬೊಜ್ಜಿನಲ್ಲಿ ಎನ್ನುವ ಮಾತಿತ್ತು. ಇದೀಗ ಹಳ್ಳಿಗರ ಬದುಕು ನಗರ ವಾಸಿಗರಿಗೇನು ಕಡಿಮೆ ಇಲ್ಲ ಎನ್ನುವಂತಾಗಿದೆ. ರೋಗ ರುಜಿನಗಳು ಹಳ್ಳಿಗರು ನಗರ ವಾಸಿಗಳೆಂದು ತಾರತಮ್ಯ ಮಾಡದೆ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ನನ್ನ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವಂತಾಗಿದೆ.  ಅದಕ್ಕೆ ಬಹುಮುಖ್ಯ ಕಾರಣ ಅನುಸರಿಸುತ್ತಿರುವ ಆಹಾರ ಕ್ರಮ ಎನ್ನುವುದು ಆಹಾರತಜ್ಞರ ಅಭಿಪ್ರಾಯ. ಇತ್ತೀಚಿನ ದಿನಗಳಲ್ಲಿ ವೈದ್ಯರ ಸಲಹೆಯಂತೆ ಕೆಲವೊಂದಿಷ್ಟು ಮಂದಿ ಸಿರಿಧಾನ್ಯಗಳಿಂದ ಮಾಡಿದ ಆಹಾರ ಸೇವಿಸುತ್ತಿದ್ದಾರೆ. ಆದರೆ ಯಾವುದೋ ಶಿಕ್ಷೆ ಅನುಭವಿಸುತ್ತಿದ್ದೇವೆ ಎನ್ನುವ ಭಾವನೆಯಲ್ಲಿ ಮುಳುಗಿರುತ್ತಾರೆ. ಇದೀಗ ಮುಜುಗರ ಇಲ್ಲದೆ ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ಅವಕಾಶ ನಿಮಗೆ ಒದಗಿ ಬಂದಿದೆ.

ಮಾರುಕಟ್ಟೆಗೆ ಬಂದಿದೆ ಸಿರಿಧಾನ್ಯಗಳ ಮಿಶ್ರಣ ಕಲಾರಾಣಿ: ವೈದ್ಯರು ಬರೆದುಕೊಡುವ ಪ್ರೋಟಿನ್ ಪೌಡರ್ ಬಾಕ್ಸ್ ಮೇಲೆ ಎನರ್ಜಿ, ಪ್ರೋಟಿನ್ ಅಂತೆಲ್ಲಾ ಬರೆದಿರುತ್ತಾರೆ. ಆದರೆ ಅದೂ ಕೂಡ ರಸಾಯನಿಕ ವಸ್ತುಗಳ ಮಿಶ್ರಣವೇ ಆಗಿರುತ್ತದೆ. ಆದರೆ ಮೇಲೆ ಹೇಳಿದ ಸಿರಿಧಾನ್ಯದ ಜೊತೆಗೆ ಏಕದಳ, ದ್ವಿದಳ ಧಾನ್ಯದ ಮಿಶ್ರಣದ  ಕಲಾರಾಣಿ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್ ಮಾರುಕಟ್ಟೆಗೆ ಪ್ರವೇಶ ಮಾಡಿದೆ. ಇದರಲ್ಲಿ ವಿವಿಧ ರೀತಿಯ ಸಿರಿಧಾನ್ಯಗಳ ಜೊತೆಗೆ ವಿವಿಧ ಏಕದಳ, ದ್ವಿದಳ ಧಾನ್ಯ ಸೇರಿ  ಪೌಷ್ಠಿಕ ಆಹಾರ ಪದಾರ್ಥಗಳ ಸಂಗ್ರಹ ಆಗಿದೆ. ISO ಸರ್ಟಿಫೈಡ್ ಕಂಪನಿ ಇದಾಗಿದ್ದು, ಸಂಪೂರ್ಣ ತಯಾರಿಕೆ ಸ್ವಾಭಾವಿಕ ವಿಧಾನದಿಂದ ಕೂಡಿದೆ. ಅಷ್ಟೇ ಅಲ್ಲದೆ ಭಾರತ ಆಹಾರ ಗುಣಮಟ್ಟ ಮಾಪನ ಸಂಸ್ಥೆ The Food Safety and Standards Authority of India (FSSAI) ಕಲಾರಾಣಿ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್ ಸಂಸ್ಥೆಗೆ ಮಾನ್ಯತೆ ನೀಡಿದೆ. ಸಕ್ಕರೆ ಸೇರಿಸದೆ ಇರುವ ಕಾರಣ ಮಧುಮೇಹಿಗಳಿಗೂ ಹೇಳಿ ಮಾಡಿಸಿದ ಪೌಷ್ಠಿಕ ಆಹಾರ ಎನ್ನಬಹುದು ಈ ವೇದ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್.

kalarani 22

 

ಕಲಾರಾಣಿ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್ ರೀತಿಯಲ್ಲೇ ಸಾಕಷ್ಟು ಪೌಡರ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇರಬಹುದು. ಆದರೆ ಮಾನ್ಯತೆ ಪಡೆದ ಆಹಾರ ಸಂಸ್ಥೆಯಿಂದ ಗುಣಮಟ್ಟ ಪರೀಕ್ಷೆ ಮಾಡಿಸಿದ ಬಳಿಕ ಗ್ರಾಹಕರಿಗೆ ತಲುಪಿಸಬೇಕು ಎನ್ನುವ ಆಶಯ ಮೆಚ್ಚುವ ವಿಚಾರ. ಅದೂ ಅಲ್ಲದೆ ಸ್ವಾವಲಂಬಿ ಭಾರತ ಯೋಜನೆಯಡಿ ಕಲಾರಾಣಿ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್ ಸಂಸ್ಥೆ ಆರಂಭವಾಗಿದ್ದು, ಈಗಾಗಲೇ ಸಾಕಷ್ಟು ಖ್ಯಾತಿ ಪಡೆದುಕೊಂಡಿದೆ. ಹಣವನ್ನೂ ಕೊಟ್ಟು ಆರೋಗ್ಯ ಹಾಳು ಮಾಡಿಕೊಳ್ಳುವ ಪಾನೀಯಗಳನ್ನು ಕುಡಿಯುವ ಬದಲು ಸಿರಿಧಾನ್ಯಗಳ ಮಿಶ್ರಣ ವೇದ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್ ಕುಡಿಯುವುದು ಆರೋಗ್ಯಕ್ಕೆ ಹಿತಕರ. ಬಾಕ್ಸ್ ಮೇಲೆ ಕಾಣುವ ನಂಬರ್‌ಗೆ ಕರೆ ಮಾಡಬಹುದು ಅಥವಾ ಇ-ಮೇಲ್ ವಿಳಾಸಕ್ಕೂ ಸಂಪರ್ಕ ಸಾಧಿಸಿದರೆ ಕಲಾರಾಣಿ  ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್ ನಿಮ್ಮ ಮನೆ ಬಾಗಿಲಿಗೇ ತಲುಪಲಿದೆ. ಕೊರೊನಾ ಓಡಿಸುವ ಶಕ್ತಿ, ಮಕ್ಕಳಿಗೆ ಬೇಕಿದೆ ಉತ್ತಮ ಯುಕ್ತಿ. ಕಲಾರಾಣಿ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್ ಆಯ್ಕೆ ನಿಮ್ಮದಾಗಿರಲಿ ಎನ್ನುತ್ತಾರೆ ಸಂಸ್ಥೆಯ ಎಂಡಿ ಶಶಿಕಲಾ.

kalarani 22 1

ಕಲಾರಾಣಿ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್ ನ  ಉಪಯೋಗಗಳು:  ಸಕ್ಕರೆ ಕಾಯಿಲೆ, ರಕ್ಷತದ ಒತ್ತಡ, ಗ್ಯಾಸ್ಟ್ರಿಕ್, ಸುಸ್ತು, ನಿಶ್ಯಕ್ತಿ ಕಡಿಮೆಗೊಳಿಸುವುದು, ಹೃದಯ ಸಬಂಧಿ ಕಾಯಿಲೆ ತಡೆಗಟ್ಟುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ರಕ್ತ ಹೀನತೆ ತಡೆಗಟ್ಟುವುದು, ಕೆಂಪು ರಕ್ತ ಕಣ ಹೆಚ್ಚುಸಿ, ಥೈರಾಯ್ಡ್ ,ಅಸ್ತಮಾ ತಡೆಗಟ್ಟುತ್ತದೆ.

ಉಪಯೋಗಿಸುವ ವಿಧಾನ: ಒಂದು ಕಪ್ ಹಾಲು ಅಥವಾ ನೀರಿಗೆ 2 ಚಮಚ ಕಲಾರಾಣಿ ಹೆಲ್ತ್ ಮಿಕ್ಸ ಪೌಡರ್ ಬೆರೆಸಿ ಕದಡಿ 5 ನಿಮಿಷ ಕುದಿಸಿ, ರುಚಿಗೆ ತಕ್ಕಷ್ಟು ಉಪ್ಪು ಅಥವಾ ಬೆಲ್ಲ ಸೇರಿಸಿ ಸೇವಿಸಿ..

 

 

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *