ದಾವಣಗೆರೆ: ಹರಿಹರ ನಗರದ ಗಾಂಧಿ ಮೈದಾನದಲ್ಲಿನ ಸಾರ್ವಜನಿಕ ವಿನಾಯಕ ಸಂಘದಿಂದ 60 ನೇ ವರ್ಷದ ವಿನಾಯಕ ಮಹೋತ್ಸವ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಯು ಸೆಪ್ಟೆಂಬರ್ 03 ರಂದು ಹರಿಹರದ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಪ್ರಥಮ ಬಹುಮಾನ 5,555 ದ್ವಿತೀಯ ಬಹುಮಾನ 3,333 ಹಾಗೂ ತೃತೀಯ ಬಹುಮಾನ 1,111 ರೂಪಾಯಿ ಆಗಿದೆ. ಸ್ಫರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಆ.22ರಿಂದ 29ರ ಮಧ್ಯಾಹ್ನ 3 ಗಂಟೆಯೊಳಗೆ ನಿಮ್ಮ ಮಕ್ಕಳ, ಮಹಿಳೆಯರ ಹೆಸರನ್ನು ನೊಂದಾಯಿಸ ತಕ್ಕದ್ದು.ಮೊದಲು 100 ಸ್ಪರ್ಧಿಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು. ಹೆಸರು ನೋಂದಾಯಿಸಲು 9743758196, 9110615492, 91104485176, 9482031495 ಸಂಪರ್ಕಿಸಿ.



