Connect with us

Dvgsuddi Kannada | online news portal | Kannada news online

ಭೀಮಸಮುದ್ರಕ್ಕೆ ಸೂಳೆಕೆರೆ ನೀರು ಹರಿಸುವ ಹುನ್ನಾರ ನಡೆಸಿಲ್ಲ: ಜಿ.ಎಂ.ಸಿದ್ದೇಶ್ವರ್, ಸಂಸದ

ಚನ್ನಗಿರಿ

ಭೀಮಸಮುದ್ರಕ್ಕೆ ಸೂಳೆಕೆರೆ ನೀರು ಹರಿಸುವ ಹುನ್ನಾರ ನಡೆಸಿಲ್ಲ: ಜಿ.ಎಂ.ಸಿದ್ದೇಶ್ವರ್, ಸಂಸದ

ಚನ್ನಗಿರಿ: ತಾಲ್ಲೂಕಿನ ಸೂಳೆಕೆರೆಯ ನೀರನ್ನು ಭೀಮಸಮುದ್ರಕ್ಕೆ ಹರಿಸುವ ಹುನ್ನಾರ ವನ್ನು ನಾನು ಎಂದಿಗೂ ಮಾಡಿಲ್ಲ. ಕೆರೆಗೆ ನೀರು ತುಂಬಿಸುವ ಪ್ರಯತ್ನ ಮಾಡುತ್ತಿದ್ದೇನೆಯೇ ವಿನಃ ನೀರು ಖಾಲಿ ಮಾಡುವ ಚಿಂತನೆ ನಮ್ಮದಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಮೈ ತುಂಬಿದ ಕಾರಣ ಬಾಗಿನ ಅರ್ಪಿಸಿ, ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ವೇದಿಕೆ ಕಾರ್ಯ ಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. 

2009ರಲ್ಲಿ ಡ್ಯಾಂನಲ್ಲಿ ನೀರು ಕುಸಿತ ಕಂಡಿತ್ತು. ಮಳೆ ಸಮರ್ಪಕವಾಗಿ ಬಾರದ ಕಾರಣ ಸೂಳೆಕೆರೆ ಬರಿದಾ ಗಿತ್ತು. ಆದರೆ, ಈ ಸಂದರ್ಭದಲ್ಲಿ ಸೂಳೆಕೆರೆ ನೀರಿನ್ನು ಭೀಮಸಮುದ್ರಕ್ಕೆ ಕೊಂಡೊಯ್ದು ನನ್ನ ಅಡಿಕೆ ತೋಟಕ್ಕೆ ನೀರನ್ನು ಹಾಕಿರುವುದಾಗಿ ಕೆಲ ವಿರೋಧಿಗಳು ನನ್ನ ಮೇಲೆ ಸುಳ್ಳು ಅಪಪ್ರಚಾರ ಮಾಡಿದ್ದರು. ಈ ಅಪಪ್ರಚಾರವನ್ನು ಜನರು ನಂಬಿದ್ದರು. ಇದರಿಂದ ನನಗೆ ವೈಯಕ್ತಿಕವಾಗಿ ಬಹಳ ದುಃಖವಾಗಿ ಕಣ್ಣೀರು ಹಾಕಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಜನರಿಗೆ ಅಪಪ್ರಚಾರದ ಸತ್ಯಾಂಶ ತಿಳಿಯಿತು. ತದ ನಂತರ ನಡೆದ ಚುನಾವಣೆಯಲ್ಲಿ ಚನ್ನಗಿರಿ ಮತದಾರರು ನನ್ನ ಕೈಹಿಡಿದು 2024 ಮತಗಳ ಅಂತರದಿಂದ ಗೆಲುವು ತಂದುಕೊಟ್ಟರು. ಈ ಮೂಲಕ ನನ್ನ ಮೇಲಿದ್ದ ಅಪಪ್ರಚಾರಕ್ಕೆ ತೆರೆ ಎಳೆದಂತಾಯಿತು ಎಂದು ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

ದಾವಣಗೆರೆ

Advertisement
Advertisement Enter ad code here

Title

To Top