ದಾವಣಗೆರೆ: ಜನವರಿ 15ರಂದು ಬೆಳಗ್ಗೆ ಧಾರವಾಡದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರವಾಗಿ ಸಂಭವಿಸಿ ಅಫಘಾತದಲ್ಲಿ 12 ಜನ ಮೃತಪಟ್ಟಿದ್ದ ದಾರುಣ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ಮೃತಪಟ್ಟವರಿಗೆ ಇಂದು ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮೃತಪಟ್ಟವರ ಕುಟುಂಬ ಸದಸ್ಯರು, ಸ್ನೇಹಿತರಿಂದ ದಾವಣಗೆರೆಯಿಂದ ಧಾರವಾಡ ವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.47 ಕೋಟಿ ಹಣ ವಶಕ್ಕೆ ಪಡೆದ ಪೊಲೀಸರು

ಈ ಅಪಘಾತದಲ್ಲಿ ವಿದ್ಯಾರ್ಥಿನಿಯರಿಬ್ಬರು ಸೇರಿದ್ದಾರೆ. ಜಾಥಾದ ಮೂಲಕ ಕುಟುಂಬಸ್ಥರು ಮೃತಪಟ್ಟವರಿಗೆ ಅಪಘಾತ ಸ್ಥಳದಲ್ಲೇ ಶ್ರದ್ಧಾಂಜಲಿ ಸಲ್ಲಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

ದಾವಣಗೆರೆಯ ಐಎಂಎ ಹಾಲ್ನಿಂದ ಒಂದು ನೂರಕ್ಕೂ ಹೆಚ್ಚು ವಾಹನಗಳು ದಾವಣಗೆರೆಯಿಂದ ಧಾರವಾಡಕ್ಕೆ ಜಾಥಾ ಭಾಗಿಯಾಗಿದ್ದವು. ಜಾಥಾಕ್ಕೆ ಧಾರವಾಡದ ಕೆಲ ಸಂಘಟನೆಗಳಿಂದ ಸಹಕಾರ ಸಿಕ್ಕಿತು.




