ದಾವಣಗೆರೆ: ಮಾರ್ಚ್ 4 ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ರಥೋತ್ಸವ ಪ್ರಯುಕ್ತ ಮಾರ್ಚ್ 1ರ ಶುಕ್ರವಾರ ಸಂಜೆಯಿಂದ ಭಕ್ತರು ಪಾದಯಾತ್ರೆ ಹೊರಡಲಿದ್ದಾರೆ. ಅರಸೀಕೆರೆ ಶ್ರೀ ಗುರು ಕೋಲಶಾಂತೇಶ್ವರ ವಿರಕ್ತ ಮಠದಲ್ಲಿ
ಪಾದಯಾತ್ರಿಗಳಿಗೆ ಪ್ರಸಾದ ದಾಸೋಹ ಸೇವೆ ಮಾಡುವ ಭಕ್ತರು,ದಾನಿಗಳು ದೇವಸ್ಥಾನ ಸಮಿತಿಯ ಕಣಕುಪ್ಪಿ ಮುರುಗೇಶಪ್ಪ -9611889151, ಟಿ.ಜಿ. ಬಕೇಶಪ್ಪ-9108988898, ಬಿ. ಚಿದಾನಂದಪ್ಪ -98445 28449 ಮಲ್ಲಾಬಾದಿ ಗುರುಬಸವರಾಜ್-7975797079 ಸಂಪರ್ಕಿಸಬಹುದು. ದಾಸೋಹ ಮನೆ ಮತ್ತು ಸಭಾಂಗಣ ಕಟ್ಟಡವು ಪ್ರಗತಿ ಹಂತದಲ್ಲಿದೆ. ಭಕ್ತಾದಿಗಳು ದೇಣಿಗೆ ಸಲ್ಲಿಸಲು ಕೋರಲಾಗಿದೆ.



