Connect with us

Dvgsuddi Kannada | online news portal | Kannada news online

ದಾವಣಗೆರೆ: ಎಲ್ಲರೂ ಪ್ರೀತಿಯಿಂದ ಇರೋಣ; ಫ್ಯಾನ್ಸ್ ವಾರ್ ಬೇಡ; ನಟ ಶಿವರಾಜ್ ಕುಮಾರ್

IMG 20230105 174452

ದಾವಣಗೆರೆ

ದಾವಣಗೆರೆ: ಎಲ್ಲರೂ ಪ್ರೀತಿಯಿಂದ ಇರೋಣ; ಫ್ಯಾನ್ಸ್ ವಾರ್ ಬೇಡ; ನಟ ಶಿವರಾಜ್ ಕುಮಾರ್

ದಾವಣಗೆರೆ: ಎಲ್ಲರೂ ಪ್ರೀತಿಯಿಂದ ಚೆನ್ನಾಗಿರೋಣ. ನಮ್ಮ ನಡುವೆ ಫ್ಯಾನ್ಸ್ ವಾರ್ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಫ್ಯಾನ್ಸ್ ವಾರ್ ಕುರಿತು ನಟ ಶಿವ ರಾಜ್​ಕುಮಾರ್ ಬೇಸರ ವ್ಯಕ್ತಪಡಿಸಿದರು.

ಕಳೆದ ಶುಕ್ರವಾರ ತೆರೆ ಕಂಡ ಹ್ಯಾಟ್ರಿಕ್ ಹಿರೋ ಶಿವ ರಾಜ್​ಕುಮಾರ್ ನಟನೆಯ
ವೇದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ತಮ್ಮ 125ನೇ ಚಿತ್ರ ಥಿಯೇಟರ್​ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆ ದಾವಣಗೆರೆಯಲ್ಲಿ ಆಗಮಿಸಿದ್ದರು. ಈ ವೇಳೆ ಫ್ಯಾನ್ಸ್ ವಾರ್ ಕುರಿತು ಈ ರೀತಿ ಪ್ರತಿಕ್ರಿಯೆ ನೀಡಿದರು.

ಅಭಿಮಾನಿಗಳು ಫ್ಯಾನ್ಸ್ ವಾರ್ ಬೇಡ ಅಂತ‌ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇನೆ. ಎಲ್ಲರೂ ಚೆನ್ನಾಗಿರೋಣ, ಯಾರ ವಿರುದ್ಧವೂ ಮಾತನಾಡಿಲ್ಲ, ಎಲ್ಲರ ಬಗ್ಗೆಯೂ ಪ್ರೀತಿ ಇದೆ. ನನ್ನ ಹೃದಯ ತೆರದು ನೋಡಿದ್ರೆ ಕೇವಲ ಪ್ರೀತಿಯೇ ಸಿಗುತ್ತೆ ಎಂದರು.

ವೇದ ಸಿನಿಮಾ ಪ್ರಮೋಷನ್‌ ಗೆ ಪತ್ನಿ ಗೀತಾ ಶಿವ ರಾಜ್​ಕುಮಾರ್ ಅವರ ಜೊತೆ ಆಗಮಿಸಿದ ನಟ ಶಿವ ರಾಜ್​ಕುಮಾರ್ ಬೆಣ್ಣೆ ನಗರಿ ದಾವಣಗೆರೆ ನಗರದ ನಿಟ್ಟುವಳ್ಳಿ ಬಳಿ ಇರುವ ದುರ್ಗಾಂಭಿಕ ದೇವಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಿದರು.ವೇದ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಕುಟುಂಬ ಸಮೇತ ನೋಡುವ ಸಿನಿಮಾ ಎಂದರು.

ಗೀತಾ ಪ್ರೋಡಕ್ಷನ್ ಅಡಿಯ ಮೊದಲ ಚಿತ್ರವಾಗಿ ‘ವೇದ’ವನ್ನು ನಿರ್ಮಾಣ ಮಾಡಿದ್ದು ಬಹಳ ಸಂತೋಷ ಕೊಟ್ಟಿದೆ ಎಂದರು. ಇನ್ನೂ ಎರಡು ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ನಾನು ಅಪ್ಪು ಒಂದು ಸಿನಿಮಾ‌ ಮಾಡಬೇಕು ಅಂದುಕೊಂಡಿದ್ದೆವು. ಅದ್ರೆ ಅದು ಸಾಧ್ಯವಾಗಲಿಲ್ಲ ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top