Connect with us

Dvgsuddi Kannada | online news portal | Kannada news online

ಇನ್ಮುಂದೆ ಐತಿಹಾಸಿಕ ಉಚ್ಚಂಗಿದುರ್ಗ ದೇವಸ್ಥಾನದಲ್ಲೂ ಆನ್ ಲೈನ್ ಮೂಲಕ ಕಾಣಿಕೆ ಸಲ್ಲಿಸಬಹುದು…!

ಹರಪನಹಳ್ಳಿ

ಇನ್ಮುಂದೆ ಐತಿಹಾಸಿಕ ಉಚ್ಚಂಗಿದುರ್ಗ ದೇವಸ್ಥಾನದಲ್ಲೂ ಆನ್ ಲೈನ್ ಮೂಲಕ ಕಾಣಿಕೆ ಸಲ್ಲಿಸಬಹುದು…!

ಹರಪನಹಳ್ಳಿ: ಇನ್ಮುಂದೆ ದೇವಸ್ಥಾನಕ್ಕೆ ಹೋಗುವಾಗ ಕಾಣಿಕೆ ಹಾಕಲು ಕೈಯಲ್ಲಿ ಹಣ ಇಟ್ಟುಕೊಂಡು ಹೋಗಬೇಕು ಎಂದೇನಿಲ್ಲ, ಕೈಯಲ್ಲೊಂದು ಮೊಬೈಲ್ ಇದ್ರೆ ಸಾಕು. ಆ ಮೊಬೈಲ್ ಮೂಲಕವೇ  ದೇವರಿಗೆ ಕಾಣಿಕೆ ಸಲ್ಲಿಸಬಹುದು.

ಹೌದು, ವಿಜಯನಗರ ಜಿಲ್ಲೆ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಉಚ್ಚoಗೆಮ್ಮ ದೇವಸ್ಥಾನದಲ್ಲಿ ಇ-ಹುಂಡಿ ಅಳವಡಿಕೆ ಮಾಡಲಾಗಿದೆ. ದೇವಸ್ಥಾನದಲ್ಲಿ ಎಸ್.ಬಿ.ಐ ಇ-ಹುಂಡಿ ಕ್ಯೂ-ಆರ್ ಕೋಡ್ ಅಳವಡಿಸಿದ್ದು, ಭಕ್ತರು ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ಕಾಣಿಕೆ ಸಲ್ಲಿಸಬಹುದು.

ಬಳ್ಳಾರಿ/ವಿಜಯನಗರ ಜಿಲ್ಲೆ ಸಹಾಯಕ ಆಯುಕ್ತರಾದ ಪ್ರಕಾಶ್ ರಾವ್,ದೇವಸ್ಥಾನದ ತಹಶೀಲ್ದಾರ್ ಡಾ. ಶಿವಕುಮಾರ್ ಬಿರಾಧರ್, ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ, ಎಸ್ ಬಿ ಐ ಬ್ಯಾಂಕ್ ಮುಖ್ಯ ವ್ಯವಸ್ಥಾಪಕಾರದ ಸೆಲ್ವ ಕುಮಾರ್ ಉಚ್ಚoಗೇಮ್ಮನ ದೇವಸ್ಥಾನದಲ್ಲಿ ಎಸ್.ಬಿ.ಐ ಇ-ಹುಂಡಿ ಕ್ಯೂ-ಆರ್ ಕೋಡ್ ಅಳವಡಿಕೆ ಮಾಡಿದರು.

ಈ ವೇಳೆ ಮಾತನಾಡಿದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಇಂದಿನ ಆಧುನಿಕ ತೆಯ ಡಿಜಿಟಲ್ ಯುಗದಲ್ಲಿ ದೇವಸ್ಥಾನದಲ್ಲಿ ಇ-ಹುಂಡಿ ಕ್ಯೂ-ಆರ್ ಕೋಡ್ ಅಳವಡಿಕೆ ಮಾಡಿದ್ದು ಭಕ್ತಾದಿಗಳು ದೇವಸ್ಥಾನದ ಅಕೌಂಟಿಗೆ ಕ್ಯೂ-ಆರ್ ಕೋಡ್ ಮೂಲಕ ಕಾಣಿಕೆ ಹಾಕಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ,ಬ್ಯಾಂಕ್ ಸಿಬ್ಬಂದಿಗಳಾದ ವಸಂತ್ ಉಪಸ್ಥಿತರಿದ್ದರು..

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top