Connect with us

Dvgsuddi Kannada | online news portal | Kannada news online

ದಾವಣಗೆರೆ: ಭೀಕರ ವಿದ್ಯುತ್ ಅವಘಡ; ಇಬ್ಬರು ರೈತರು ಸಾವು

ದಾವಣಗೆರೆ

ದಾವಣಗೆರೆ: ಭೀಕರ ವಿದ್ಯುತ್ ಅವಘಡ; ಇಬ್ಬರು ರೈತರು ಸಾವು

ದಾವಣಗೆರೆ: ಅಡಕೆ ತೋಟದಲ್ಲಿ ಬೋರ್ ಆನ್ ಮಾಡಲು ಹೋಗಿದ್ದ ಇಬ್ಬರು ರೈತರು ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ವಿದ್ಯುತ್ ತಂತಿ ಸ್ಕಿನ್ ಆಗಿ ಬೋರ್ಡ್ ಗೆ ತಗುಲಿದ್ದು, ಇದನ್ನು ತಿಳಿಯದ ರೈತ ಬೋರ್ ಆನ್ ಮಾಡಲು ಹೋದಾಗ ಈ ಘಟನೆ ನಡೆದಿದೆ. ಮೊದಲು ಜಮೀನಿನ ಮಾಲೀಕನಿಗೆ ವಿದ್ಯುತ್ ತಗುಲಿದೆ. ನಂತರ ಕೆಲಸಕ್ಕೆ ಬಂದ ಕಾರ್ಮಿಕ ಬಿಡಿಸಲು ಹೋಗಿದ್ದಾನೆ. ಆಗ ಇಬ್ಬರಿಗೂ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ದಾವಣಗೆರೆ ತಾಲೂಕಿನ ಬಾಡ ಗ್ರಾಮದ ಬಳಿ ನಡೆದಿದೆ.

ಮಲ್ಲಿಕಾರ್ಜುನ(65), ಚಂದ್ರಪ್ಪ(45) ಮೃತಪಟ್ಟವರು. ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋದ ವೇಳೆ ದುರ್ಘಟನೆ ಸಂಭವಿಸಿದೆ. ಮೋಟರ್ ಆನ್ ಮಾಡುವಾಗ ಬೋರ್ಡ್ ನಿಂದ ವಿದ್ಯುತ್ ಪ್ರವಹಿಸಿ ಮಲ್ಲಿಕಾರ್ಜುನಪ್ಪ ನೆಲಕ್ಕೆ ಬಿದ್ದಿದ್ದಾರೆ. ಅವರ ರಕ್ಷಣೆಗೆ ಹೋದ ಕಾರ್ಮಿಕ ಚಂದ್ರಪ್ಪನಿಗೂ ವಿದ್ಯುತ್ ತಗುಲಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top