Connect with us

Dvgsuddi Kannada | online news portal | Kannada news online

ದಾವಣಗೆರೆ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ವಾಟ್ಸಾಪ್ ನಂಬರ್ ರಚನೆ; ಇನ್ಮುಂದೆ ಟ್ರಾಫಿಕ್ ಜಾಮ್, ಸಂಚಾರಿ ನಿಮಯ ಉಲ್ಲಂಘನೆಯ ಫೋಟೋ ಈ ನಂಬರ್ ಗೆ ವಾಟ್ಸಾಪ್ ಮಾಡಿದ್ರೆ ಕ್ರಮ; ಎಸ್ಪಿ

ದಾವಣಗೆರೆ

ದಾವಣಗೆರೆ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ವಾಟ್ಸಾಪ್ ನಂಬರ್ ರಚನೆ; ಇನ್ಮುಂದೆ ಟ್ರಾಫಿಕ್ ಜಾಮ್, ಸಂಚಾರಿ ನಿಮಯ ಉಲ್ಲಂಘನೆಯ ಫೋಟೋ ಈ ನಂಬರ್ ಗೆ ವಾಟ್ಸಾಪ್ ಮಾಡಿದ್ರೆ ಕ್ರಮ; ಎಸ್ಪಿ

ದಾವಣಗೆರೆ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ವಾಟ್ಸಾಪ್ ನಂಬರ್ ರಚನೆ‌ ಮಾಡಲಾಗಿದ್ದು, ಇನ್ಮುಂದೆ ಸಾರ್ವಜನಿಕರು ಟ್ರಾಫಿಕ್ ಜಾಮ್, ಸಂಚಾರಿ ನಿಮಯ ಉಲ್ಲಂಘನೆಯ ಫೋಟೋ ತಗೆದು ಸಾರ್ವಜನಿಕರೇ ಈ ನಂಬರ್ ಗೆ ವಾಟ್ಸಾಪ್ ಮಾಡಿದ್ರೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಎಸ್ಪಿ ಅರುಣ್ ಕೆ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಿಯಾದರೂ ಸಂಚಾರಕ್ಕೆ ತೊಂದರೆಯಾಗಿದ್ದಲ್ಲಿ ಹಾಗೂ ಇನ್ನಿತರೆ ಯಾವುದೇ ರೀತಿಯ ಟ್ರಾಫಿಕ್ ಸಮಸ್ಯೆ ಇದ್ದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ನಲ್ಲಿ 24*7 ಸೌಲಭ್ಯ ಇರುವ ಮೊಬೈಲ್ ನಂಬರ್‌ 9480803208 ನಂಬರ್ ಗೆ ನೇರವಾಗಿ ಕರೆ ಮಾಡಿ ಮಾಹಿತಿಯನ್ನು ತಿಳಿಸಬಹುದು. ಹಾಗೂ ಈ ನಂಬರ್‌ಗೆ ವ್ಯಾಟ್ಸಪ್ ಇದ್ದು ವ್ಯಾಟ್ಸಪ್ ಮೂಲಕವಾದರೂ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಸಂದೇಶವನ್ನು ಕಳುಹಿಸಿದಲ್ಲಿ, ನಿಮ್ಮ ಕರೆಗೆ/ಸಂದೇಶಕ್ಕೆ ಕೂಡಲೇ ಸ್ಪಂದಿಸಿ ಟ್ರಾಫಿಕ್ ಸಮಸ್ಯೆಯನ್ನು
ಬಗೆಹರಿಸಲಾಗುವುದು. ಯಾವುದಾದರೂ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಸಾರ್ವಜನಿಕರಿಗೆ ಕಂಡು ಬಂದಲ್ಲಿ ಅವರು ಅದರ ಫೋಟೋ ತೆಗೆದು, ವಾಹನದ ನೋಂದಣಿ ಸಂಖ್ಯೆ ಸಮೇತ ಸ್ಥಳ ಮತ್ತು ಸಮಯವನ್ನು ನಮೂದಿಸಿ, ಈ ನಂಬರ್ ಗೆ ವ್ಯಾಟ್ಸಪ್ ಮಾಡಿದಲ್ಲಿ ಆ ವಾಹನ ಸವಾರರ ವಿರುದ್ಧ ಸರ್ವಾಜನಿಕರ ದೂರು ಎಂದು ದಾಖಲಿಸಿ, ಸಂಚಾರ ನಿಯಮದಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ಸಾರ್ವಜನಿಕರಲ್ಲಿ ಕೋರಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top