Connect with us

Dvgsuddi Kannada | online news portal | Kannada news online

ದಾವಣಗೆರೆ: ಕಣ್ಮನ ಸೆಳೆಯುವ ನವೀಕೃತ ರೈಲ್ವೆ ನಿಲ್ದಾಣ ನಾಳೆ ಲೋಕಾರ್ಪಣೆ

ಪ್ರಮುಖ ಸುದ್ದಿ

ದಾವಣಗೆರೆ: ಕಣ್ಮನ ಸೆಳೆಯುವ ನವೀಕೃತ ರೈಲ್ವೆ ನಿಲ್ದಾಣ ನಾಳೆ ಲೋಕಾರ್ಪಣೆ

ದಾವಣಗೆರೆ:ಮಧ್ಯ ಕರ್ನಾಟಕ ದಾವಣಗೆರೆಯ ನವೀಕೃತಗೊಂಡ ರೈಲ್ವೆ ನಿಲ್ದಾಣ ನಾಳೆ ಉದ್ಘಾಟನೆಯಾಗಲಿದೆ. ತನ್ನ ಮನಹೋಹಕ ಆಕರ್ಷಣೆಯಿಂದ ಕಂಗೊಳಿಸುತ್ತಿರುವ ಬೆಣ್ಣೆ ನಗರಿಯ ರೈಲ್ವೆ ನಿಲ್ದಾಣ, ನಾಳೆ ಅಂದರೆ ಏ.03 ರಂದು ಶನಿವಾರ ಲೋಕರ್ಪಣೆಗೊಳ್ಳಲಿದೆ.

ನಾಳೆ ಬೆಳಗ್ಗೆ (ಏ .03) 11 ಗಂಟೆಗೆ ಸಂಸದ ಜಿ.ಎಂ. ಸಿದ್ದೇಶ್ವರ್ ರೈಲ್ವೆ ನಿಲ್ದಾಣ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ಇಂದು ಸಂಜೆ 7.30ಕ್ಕೆ ರಾತ್ರಿ ವಿಹಂಗಮ ಸುಂದರ ನೋಟವನ್ನು ಸವಿಯಲು ಉದ್ದೇಶಿಸಲಾಗಿದೆ.

  • ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಒಳಪಡುವ ನಿಲ್ದಾಣ
  • ಕಣ್ಮನ ಸೆಳೆಯುವ ಆಕರ್ಷಣೆ ಪಡೆದ ನವೀಕೃತ ನಿಲ್ದಾಣ
  • 18.45 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣವನ್ನು ನವೀಕರಣ
  • ಎರಡು ಎಸ್ಕಲೇಟರ್ ಸೌಲಭ್ಯ ವ್ಯವಸ್ಥೆ
  • ರೈಲ್ವೆ ನಿಲ್ದಾದ ಆಕರ್ಷಣೆ ಹೆಚ್ಚಿಸಿದ  ‘ಐ ಲವ್ ಡಿವಿಜಿ’ ಸೆಲ್ಫೀ ಸ್ಟಾಟ್
  •  100 ಅಡಿ ಎತ್ತರದ ರಾಷ್ಟ ಧ್ವಜ ಸ್ತಂಭ

ದಾವಣಗೆರೆ ರೈಲು ನಿಲ್ದಾಣ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ವ್ಯಾಪ್ತಿಗೆ ಒಳಪಡಲಿದ್ದು,  ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದ್ದ ರೈಲು ನಿಲ್ದಾಣ ಇದೀಗ ಸಂಪೂರ್ಣವಾಗಿ ನವೀಕರಿಸಲಾಗಿದೆ.  ಆಧುನಿಕ ಎಲ್ಲ ಸೌಲಭ್ಯಗಳನನ್ನು ಒಳಗೊಂಡ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ. ಸುಮಾರು 18.45 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣವನ್ನು ನವೀಕರಿಸಲಾಗಿದೆ.

davangere dvg 5

ಕರ್ನಾಟಕದ 5 ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಸೌಲಭ್ಯವಿದ್ದು, ಇದರಲ್ಲಿ ದಾವಣಗೆರೆ ಸಹ ಒಂದಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬಳ್ಳಾರಿ ನಿಲ್ದಾಣದಲ್ಲಿ ಈ ಸೌಲಭ್ಯವಿದೆ. ರೈಲು ನಿಲ್ದಾಣದ ಕಟ್ಟಡವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ.  ಇನ್ನು ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್, ಎರಡು ಕಡೆ ಎಸ್ಕಲೇಟರ್, ಟಿಕೆಟ್ ವಿತರಣಾ ಕೊಠಡಿ ಸೇರಿ ಸುಮಾರು 18.45 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣವನ್ನು ನವೀಕರಣ ಮಾಡಲಾಗಿದೆ.

ನಿಲ್ದಾಣದ ಮುಂದೆ ‘ಐ ಲವ್ ಡಿವಿಜಿ’ ಎಂದು ಕೆಂಪು ಬಣ್ಣದಲ್ಲಿ ಬರೆದ ಫಲಕವಿದ್ದು, ಇದು ನಿಲ್ದಾಣದ ಸೆಲ್ಫೀ ಸ್ಟಾಟ್ ಆಗಿದೆ. 100 ಅಡಿ ಎತ್ತರದ ರಾಷ್ಟ ಧ್ವಜ ಸ್ತಂಭವನ್ನು ಸಹ ನಿರ್ಮಿಸಿಸಿದ್ದು, ಇದು ನಿಲ್ದಾಣದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ.

davangere dvg 8

ಕೋವಿಡ್ ಲಾಕ್ ಡೌನ್‌ಗೂ ಮೊದಲು 44 ರೈಲುಗಳು ದಾವಣಗೆರೆ ರೈಲು ನಿಲ್ದಾಣದಿಂದ ಸಂಚಾರ ನಡೆಸುತ್ತಿದ್ದವು. ಈಗ ವಿಶೇಷ ರೈಲುಗಳು ಮಾತ್ರ ಸಂಚಾರ ನಡೆಸುತ್ತಿದ್ದು, ದಿನಕ್ಕೆ 22 ರೈಲು ಸಂಚರಿಸುತ್ತಿವೆ. ಏಪ್ರಿಲ್ ಬಳಿಕ ಪ್ರತಿದಿನ 36 ರೈಲುಗಳು ಸಂಚಾರ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಆದಾಯ ತಂದು ಕೊಡುವ ಎರಡನೇ ನಿಲ್ದಾಣ ದಾವಣಗೆರೆಯಾಗಿದೆ.  ಇಂತಹ ನಿಲ್ದಾಣ ಇದೀಗ ನವೀಕರಣಗೊಂಡಿದ್ದು, ನಿಲ್ದಾಣದಲ್ಲಿ ಗಣ್ಯ ವ್ಯಕ್ತಿಗಳ ವಿಶ್ರಾಂತಿ ಕೊಠಡಿ ಸೇರಿದಂತೆ  23 ಕೊಠಡಿಗಳನ್ನು ಹೊಂದಿದೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top