Connect with us

Dvgsuddi Kannada | online news portal | Kannada news online

ದಾವಣಗೆರೆ: ಮಣ್ಣಿನ ಫಲವತ್ತತೆಗೆ ವರ್ಷಕ್ಕೆರಡು ಬಾರಿ ಹಸಿರೆಲೆಗೊಬ್ಬ ಬೆಳೆಯುವುದು ಸೂಕ್ತ

ಗೊಬ್ಬರ

ದಾವಣಗೆರೆ

ದಾವಣಗೆರೆ: ಮಣ್ಣಿನ ಫಲವತ್ತತೆಗೆ ವರ್ಷಕ್ಕೆರಡು ಬಾರಿ ಹಸಿರೆಲೆಗೊಬ್ಬ ಬೆಳೆಯುವುದು ಸೂಕ್ತ

ದಾವಣಗೆರೆ: ತೋಟಗಾರಿಕೆ ಬೆಳೆಗಳಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ವರ್ಷಕ್ಕೆರಡು ಬಾರಿ ಹಸಿರೆಲೆಗೊಬ್ಬರಗಳನ್ನು ಬಳಸುವುದು ಸೂಕ್ತ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.

ಕಳೆನಾಶಕ ಬಳಕೆ ಕಡಿಮೆ ಮಾಡಿ

ಜಗಳೂರು ತಾಲ್ಲೂಕು ಬಸಪ್ಪನಹಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಹಮ್ಮಿಕೊಂಡ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿಗೆ ತೋಟಗಳಲ್ಲಿ ಕಳೆ ನಿರ್ವಹಣೆಗೋಸ್ಕರ ಕಳೆನಾಶಕದ ಬಳಕೆ ಹೆಚ್ಚಾಗುತ್ತಿದೆ. ಅತೀಯಾದ‌ ಬಳಕೆಯಿಂದ ಮಣ್ಣಿನ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕುಂಠಿತವಾಗುತ್ತಿದ್ದು, ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಎಂದರು.

ಸೆಣಬು, ಡಯಾಂಚ, ವೆಲ್‌ವೆಟ್ ಬೀನ್ಸ್ ಬೆಳೆಯಿರಿ

ಭೂಮಿ ಫಲವತ್ತತೆ ನಿರ್ವಹಣೆಗೆ ಪ್ರತೀ ವರ್ಷ ಮುಂಗಾರಿನಲ್ಲಿ ಸೆಣಬು, ಡಯಾಂಚ, ವೆಲ್‌ವೆಟ್ ಬೀನ್ಸ್, ಅವರೆ-ತೊಗರಿ ಮುಂತಾದ ಹಸಿರೆಲೆಗೊಬ್ಬರಗಳನ್ನು ಬೆಳೆದು ಭೂಮಿಗೆ ಮುಗುಚುವುದರಿಂದ ಫಲವತ್ತತೆ ಹೆಚ್ಚಿಸಲು ಸಹಾಯವಾಗುತ್ತಿದೆ ಎಂದು ತಿಳಿಸಿದರು.

ಬೆಳೆ ಪರಿವರ್ತನೆಯತ್ತ ಗಮನಹರಿಸಿ

ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ.ಓ. ಮಾತನಾಡಿ, ಮೆಕ್ಕೆಜೋಳದಲ್ಲಿ ಮುಳ್ಳುಸಜ್ಜೆ ನಿವಾರಣೆಗೆ ರೈತರು ಬೆಳೆ ಪರಿವರ್ತನೆಯತ್ತ ಗಮನಹರಿಸಬೇಕೆಂದರು. ಭೇಟಿಯ ಸಂದರ್ಭದಲ್ಲಿ ರೈತರಾದ ಶಶಿಕುಮಾರ್, ಬಡಯ್ಯ, ಗಂಗಾಧರ, ಓಬಯ್ಯ ಇತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top