Connect with us

Dvgsuddi Kannada | online news portal | Kannada news online

ದಾವಣಗೆರೆ: ನಾಳೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಬೃಹತ್ ಬೈಕ್ ರ್‍ಯಾಲಿ

ದಾವಣಗೆರೆ

ದಾವಣಗೆರೆ: ನಾಳೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಬೃಹತ್ ಬೈಕ್ ರ್‍ಯಾಲಿ

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಹಿನ್ನೆಲೆ ನಾಳೆ (ಸೋಮವಾರ) ಮಧ್ಯಾಹ್ನ 2:30 ಗಂಟೆಗೆ ಆನೆಕೊಂಡದ ಬಸವೇಶ್ವರ ದೇವಸ್ಥಾನದ ಆವರಣದಿಂದ ಬೃಹತ್ ಬೈಕ್ ರ್‍ಯಾಲಿಯನ್ನು ಮಾಜಿ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ಆನೆಕೊಂಡದ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಕೊರಚರಹಟ್ಟಿ, ಅರಳಿಮರ ಸರ್ಕಲ್, ಹಳೆ ಬೇತೂರ್ ರಸ್ತೆ, ಭಾಷಾ ನಗರ ಮುಖ್ಯ ರಸ್ತೆ ಮುಖಾಂತರ ಅಕ್ಬರ್ ರಾಜ್ ಸರ್ಕಲ್, ಎಸ್. ಪಿ.ಎಸ್ ನಗರ, ಹೊಂಡದ ಸರ್ಕಲ್ ಮಾರ್ಗವಾಗಿ ಚೌಕಿಪೇಟೆ, ಬಂಬೂ ಬಜಾರ್, ಶೇಖರಪ್ಪ ನಗರ, ಭಾರತ್ ಕಾಲೋನಿ, ಗಣೇಶ್ ಹೋಟೆಲ್, ಬ್ರಿಡ್ಜ್ (ಈರುಳ್ಳಿ ಮಾರ್ಕೆಟ್) ಮುಖಾಂತರ ಪಿಬಿ ರಸ್ತೆಗೆ ತಲುಪಿ ತ್ರಿಶೂಲ್ ರಸ್ತೆ ಮಾರ್ಗವಾಗಿ ಶಿವಪ್ಪಯ್ಯ ಸರ್ಕಲ್ ನಿಂದ ಡಾಂಗೆ ಪಾರ್ಕ್ ಮುಖಾಂತರ ಎಚ್ ಕೆ ಆರ್ ಸರ್ಕಲ್, ಅರ್.ಎಸ್ ಶೇಖರಪ್ಪ ನಿವಾಸದ ಮುಖಾಂತರ ನಿಟುವಳ್ಳಿ 60 ಅಡಿ ರಸ್ತೆ ಮಾರ್ಗವಾಗಿ ವಿದ್ಯಾನಗರ, ನೂತನ ಕಾಲೇಜ್ ರಸ್ತೆ, ಬಿಐಇಟಿ ರಸ್ತೆ, ಬಾಪೂಜಿ ಹೈಸ್ಕೂಲ್, ಲಕ್ಷ್ಮಿ ಫ್ಲೋರ್ ಮಿಲ್ ಪಕ್ಕದಿಂದ ರಿಂಗ್ ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿ ಕೊನೆಗೊಳ್ಳಲಿದೆ.

ಈ ರ್‍ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಜನಪ್ರತಿನಿಧಿಗಳು, ಮುಖಂಡರು, ಎಲ್ಲಾ ವಿಭಾಗಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಬೇಕು ಎಂದು ಜಿಲ್ಲಾಧ್ಯಕ್ಷರಾದ ಎಚ್.ಬಿ. ಮಂಜಪ್ಪ, ಪಾಲಿಕೆ ವಿಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ಬ್ಲಾಕ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಮಾಗನಹಳ್ಳಿ ಪರಶುರಾಮ್, ಜಿ.ಸಿ ನಿಂಗಪ್ಪ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top