Connect with us

Dvgsuddi Kannada | online news portal | Kannada news online

ದಾವಣಗೆರೆ: ಮೀಸಲು ಅರಣ್ಯ ಅಕ್ರಮ ಪ್ರವೇಶಿಸಿದ ಆರೋಪಿ ಬಂಧನ; ಜಿಂಕೆ ಚರ್ಮ, ನಾಡ ಬಂದೂಕು, ಬೈಕ್‌ ವಶ

ದಾವಣಗೆರೆ

ದಾವಣಗೆರೆ: ಮೀಸಲು ಅರಣ್ಯ ಅಕ್ರಮ ಪ್ರವೇಶಿಸಿದ ಆರೋಪಿ ಬಂಧನ; ಜಿಂಕೆ ಚರ್ಮ, ನಾಡ ಬಂದೂಕು, ಬೈಕ್‌ ವಶ

ದಾವಣಗೆರೆ: ಅಕ್ರಮವಾಗಿ ಮೀಸಲು ಅರಣ್ಯ ಪ್ರದೇಶಿಸಿ ಕಾಡುಪ್ರಾಣಿ ಬೇಟೆ ನಡೆಸಿದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಆರೋಪಿಯಿಂದ ಜಿಂಕೆ ಚರ್ಮ, ಒಙದು ನಾಡ ಬಂದೂಕು ಮತ್ತು ಬೈಕ್‌ ವಶಕ್ಕೆ ಪಡೆಯಲಾಗಿದೆ.

ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುದುರೆಕೊಂಡ ರಾಜ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಚಿನ್ನಿಕಟ್ಟೆ ತಮಿಳು ಕಾಲೊನಿಯ ಮೋಹನ ಬಂಧಿತ ಆರೋಪಿ. ಚಿನ್ನಿಕಟ್ಟೆಯ ಶಿವಕುಮಾರ, ದಿನೇಶ, ವಡವೇಲು ನಾಪತ್ತೆಯಾಗಿದ್ದಾರೆ.

ಬಿದರಹಳ್ಳಿಯ ಕುದುರೆಕೊಂಡ ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನಾಡಬಂದೂಕು ಹಿಡಿದು ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದ ಆರೋಪಿಯಿಂದ ಚುಕ್ಕೆ ಜಿಂಕೆಯ ಸುಲಿದ ಹಸಿ ಚರ್ಮ, ಒಂದು ನಾಡ ಬಂದೂಕು, ಬೈಕ್‌ ವಶಪಡಿಸಿಕೊಂಡಿದ್ದು, 12 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿಸಿಎಫ್ ಜಿ.ಆರ್. ಶಶಿಧರ ಮತ್ತು ಎಸಿಎಫ್ ಭಾಗ್ಯಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಒ.ಕಿಶೋರನಾಯ್ಕ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಬರ್ಕತ್‌ ಅಲಿ, ಎಂ.ಬಿ.ಶಿವಯೋಗಿ, ಜಿ.ಜಿ.ಹಸನ್ ಭಾಷ ಮತ್ತು ಗಸ್ತು ಅರಣ್ಯಪಾಲಕರಾದ ನಾಗಲಿಂಗಪ್ಪ, ಎಚ್.ಬಿ.ಅಂಜಲಿ, ಓ.ಪ್ರಭಾಕರ, ಎಚ್.ಬಿ. ಆಶಾ, ಸಿಬ್ಬಂದಿ ಎಂ.ಪಿ.ಬಸವರಾಜಪ್ಪ, ಪ್ರವೀಣ, ಸುನೀಲ, ಪ್ರದೀಪ, ರಮೇಶ, ಮೌನೇಶಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top