ದಾವಣಗೆರೆ: ಜಿಲ್ಲೆಯಲ್ಲಿ ಮೇ.19 ರಂದು 65.0 ಮಿ.ಮೀ. ಸರಾಸರಿ ಮಳೆಯಾಗಿದ್ದು, 694.42 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.
ಚನ್ನಗಿರಿಯಲ್ಲಿ 48.0 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 61.0 ಮಿ.ಮೀ, ಹರಿಹರದಲ್ಲಿ 94.0 ಮಿ.ಮೀ, ಹೊನ್ನಾಳಿ 115.0 ಮಿ.ಮೀ, ಜಗಳೂರು 34.0 ಮಿ.ಮೀ, ನ್ಯಾಮತಿಯಲ್ಲಿ 112.0 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾಮನೆ ತೀವ್ರ ಹಾನಿಯಾಗಿದ್ದು, ರೂ. 2.00 ಲಕ್ಷ, 29 ಕಚ್ಚಾಮನೆ ಭಾಗಶ: ಹಾನಿಯಾಗಿದ್ದು, ರೂ. 7.30 ಲಕ್ಷ, 563-00 ಎಕರೆ ಭತ್ತದ ಬೆಳೆ, 4-00 ಎಕರೆ ಬದನೆ ಬೆಳೆ 1-00 ಎಕರೆ ಸೌತೆಕಾಯಿ ಬೆಳೆ ಹಾನಿಯಾಗಿದ್ದು, ರೂ. 169.40 ಲಕ್ಷ, ಒಟ್ಟು ರೂ. 178.70 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 5 ಪಕ್ಕಾ ಮನೆ ತೀವ್ರ ಹಾನಿ ಯಾಗಿದ್ದು, ರೂ. 4.00 ಲಕ್ಷ, 5 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ. 2.00 ಲಕ್ಷ, 15 ಕಚ್ಚಾ ಮನೆ ಭಾಗಶ: ಹಾನಿ ಯಾಗಿದ್ದು, ರೂ. 24.00 ಲಕ್ಷ, 4000-00 ಎಕರೆ ಭತ್ತದ ಬೆಳೆ, 30-00 ಎಕರೆ ಎಲೆಬಳ್ಳಿ, 60 ಅಡಿಕೆ ಮರ ಹಾನಿಯಾಗಿದ್ದು, ರೂ. 260.00ಲಕ್ಷ, 1 ಜಾನುವಾರು ಮೃತಪಟ್ಟಿದ್ದು, ರೂ.0.30 ಲಕ್ಷಒ ಟ್ಟುರೂ.290.30 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ
ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 4 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ. 1.90 ಲಕ್ಷ ಮತ್ತು 16.20 ಎಕರೆ ಈರುಳ್ಳಿ, ಭತ್ತ ಮತ್ತು ರಾಗಿ ಬೆಳೆ ಹಾನಿಯಾಗಿದ್ದು, ರೂ.8.30 ಲಕ್ಷ ಒಟ್ಟು 10.20 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 6 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ.3.60 ಲಕ್ಷ, 26 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ. 13.00 ಲಕ್ಷ, 1 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು, ರೂ.0.30 ಲಕ್ಷ, 1-00 ಎಕರೆ ನುಗ್ಗಿ ಬೆಳೆ, 18-00 ಎಕರೆ ಭತ್ತ, 6-10 ಎಕರೆ ಮೆಕ್ಕೆ ಜೋಳ ಮತ್ತು 2-00 ಎಕರೆ ಶೇಂಗಾ ಬೆಳೆ ಹಾನಿಯಾಗಿದ್ದು, ರೂ.12.00 ಲಕ್ಷ ಒಟ್ಟು ರೂ.28.90 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 7 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ. 5.00 ಲಕ್ಷ 9 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ. 5.00 ಲಕ್ಷ, 1730-00 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ. 172.12 ಲಕ್ಷ ಒಟ್ಟು ರೂ.182.52 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 5 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ. 3.00 ಲಕ್ಷ ಮತ್ತು 3-00 ಎಕರೆ ಶೇಂಗಾ ಬೆಳೆ ಹಾನಿಯಾಗಿದ್ದು, ರೂ. 0.80 ಲಕ್ಷ ಒಟ್ಟುರೂ. 3.80 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಜಿಲ್ಲೆಯಲ್ಲಿ ಒಟ್ಟಾರೆ ರೂ. 694.42 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.