ದಾವಣಗೆರೆ: ದಾವಣಗೆರೆ ನಗರ ಉಪ ವಿಭಾಗ-1 ವ್ಯಾಪ್ತಿಯ 66/11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಜಯನಗರ ಫೀಡರ್ನಲ್ಲಿ ಬೆ.ವಿ.ಕಂ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಇಂದು (ಜ. 10) ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜಯನಗರ ಫೀಡರ್: ಜ.10 ರಂದು ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ, 60 ಅಡಿ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಜಗಳೂರು ಉಪ ವಿಭಾಗ ವ್ಯಾಪ್ತಿಯ 66/11ಕೆ.ವಿ. ಎಂ.ಯು.ಎಸ್.ಎಸ್ ನಿಂದ ಅಶ್ವತ್ರೆಡ್ಡಿ ನಗರದವರೆಗೆ ಎಸ್.ಡಿ.ಪಿ ಹೆಚ್.ಟಿ ಎ.ಬಿ ಕೇಬಲ್ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಜಗಳೂರು ವಿ.ವಿ. ಕೇಂದ್ರ ವ್ಯಾಪ್ತಿಯಲ್ಲಿ ಬರುವ ಜೆಎಫ್-13 ರಸ್ತೆಮಾಕುಂಟೆ, ಜೆಎಫ್-14 ಅರಿಶಿನಗುಂಡಿ ಹಾಗೂ ಜೆಎಫ್-15 ಜ್ಯೋತಿಪುರ ನಿರಂತರ ಜ್ಯೋತಿ ಫೀಡರ್ಗಳಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಜ. 10 ರಿಂದ 22 ರವರೆಗೆ ಮಧ್ಯಾಹ್ನ 12 ರಿಂದ ಸಂಜೆ 06ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಮತ್ತು ನೀರಾವರಿ ಪಂಪ್ಸೆಟ್ಟು ಮಾರ್ಗಗಳಿಗೆ ಎಫ್-05 ಜಮ್ಮಾಪುರ ಎಫ್-06 ಅಣಬೂರು ಎಫ್-07 ಹನುಮಂತಾಪುರ ಮತ್ತು ಎಫ್-08 ಕಸವನಹಳ್ಳಿ ಫೀಡರ್ಗಳ ಎಲ್ಲಾ ನೀರಾವರಿ ಪಂಪ್ಸೆಟ್ಟು ಮಾರ್ಗಗಳಿಗೆ ಜ.10 ರಿಂದ ಜ.22ರ ವರೆಗೆ ಬೆಳಗ್ಗೆ 06 ರಿಂದ ಮಧ್ಯಾಹ್ನ 12ರ ವರೆಗೆ ವಿದ್ಯುತ್ ಸರಬರಾಜು ಇರುತ್ತದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



