Connect with us

Dvgsuddi Kannada | online news portal | Kannada news online

ದಾವಣಗೆರೆ: ಟಿಕೆಟ್ ಗೆ 2 ಲಕ್ಷ ಕಟ್ಟಿದ ಎಸ್. ಎಸ್. ಮಲ್ಲಿಕಾರ್ಜುನ್ ಪ್ರಮಾಣಿಕತೆ ಎಲ್ಲಿ ಹೋಯ್ತು; ಯಶವಂತರಾವ್ ಜಾದವ್

IMG 20221217 131728

ದಾವಣಗೆರೆ

ದಾವಣಗೆರೆ: ಟಿಕೆಟ್ ಗೆ 2 ಲಕ್ಷ ಕಟ್ಟಿದ ಎಸ್. ಎಸ್. ಮಲ್ಲಿಕಾರ್ಜುನ್ ಪ್ರಮಾಣಿಕತೆ ಎಲ್ಲಿ ಹೋಯ್ತು; ಯಶವಂತರಾವ್ ಜಾದವ್

ದಾವಣಗೆರೆ: ದಾವಣಗೆರೆ ಉತ್ತರ ಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಅರ್ಜಿ ಸಲ್ಲಿಸಲು ನಾನು ಪ್ರಮಾಣಿಕ ನಿದ್ದೇನೆ. 2 ಲಕ್ಷ ರೂಪಾಯಿ ಕಟ್ಟಿ ಏಕೆ ಅರ್ಜಿ ಹಾಕಬೇಕು ಎಂದು ಮಾಧ್ಯಮಗಳ ಮುಂದೆ ಬಡಾಯಿ ಕೊಚ್ಚಿಕೊಂಡಿದ್ದರು. ಮಲ್ಲಿಕಾರ್ಜುನ್ ಏಕೆ ರಾತ್ರೋರಾತ್ರಿ ಎರಡು ಲಕ್ಷ ರೂಪಾಯಿ ಕಟ್ಟಿ ಅರ್ಜಿ ಹಾಕಿದ್ದಾರೆ. ಈಗ ಅವರ ಪ್ರಾಮಾಣಿಕತೆ ಎಲ್ಲಿ ಹೋಯಿತು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರು ಯಶವಂತರಾವ್ ಜಾದವ್ ಪ್ರಶ್ನಿಸಿದ್ದಾರೆ.

2 ಲಕ್ಷ ಹಣ ಕಟ್ಟುವ ಮೂಲಕ ಈಗ ಅವರ ಅಪ್ರಮಾಣಿಕರು ಎಂದು ಒಪ್ಪಿಕೊಂಡಂತಾಯಿತು. ನಾನು ಪ್ರಾಮಾಣಿಕ ಆಕಾಶದಿಂದ ನೇರವಾಗಿ ಭೂಮಿಗೆ ಬಂದಿದ್ದೇನೆ ಎಂಬ ಅಹಂಕಾರದಿಂದ ಈ ರೀತಿ ನಡೆದುಕೊಂಡರೆ ಯಾವುದೇ ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಎಷ್ಟೇ ಶ್ರೀಮಂತನಿರಲಿ ಪಕ್ಷದ ಚೌಕಟ್ಟಿಗೆ ತಲೆಬಾಗಲೇ ಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಅವರ ಪಕ್ಷದ ರಾಜ್ಯ ಅಧ್ಯಕ್ಷರು, ಎಸ್ಎಸ್ ಮಲ್ಲಿಕಾರ್ಜುನಿಗೆ ಮುಖಕ್ಕೆ ಮಂಗಳಾರತಿ ಮಾಡಿ, ನೀನು ಹೇಗೆ ಟಿಕೆಟ್ ಪಡೆದುಕೊಳ್ಳುತ್ತಿ ನೋಡುತ್ತೇನೆ ಎಂದು ಹೇಳಿದ ತಕ್ಷಣ ಹೋಗಿ ಅರ್ಜಿ ಹಾಕಿದ್ದಾರೆ. ಇದೀಗ ಮಲ್ಲಿಕಾರ್ಜುನ್ ಪ್ರಾಮಾಣಿಕತೆ, ನಿಷ್ಠೆ ಎಲ್ಲ ಮಣ್ಣು ಪಾಲಾಗಿ ಹೋಯಿತು ಎಂದಿದ್ದಾರೆ.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top