ದಾವಣಗೆರೆ: ಶಾಸಕ ಬಿ.ಪಿ.ಹರೀಶ್ ಗೆ ಕಾಮನ್ ಸೆನ್ಸ್ ಇಲ್ಲ. ಅವನು ಶಾಸಕ ಹ್ಯಾಂಗದನೋ..? ನಿಜವಾಗಲು ಅವರನ್ನು ಆಯ್ಕೆ ಮಾಡಿ ಹರಿಹರ ಜನ ತಪ್ಪು ಮಾಡಿದ್ದಾರೆ. ಹರಿಹರದಲ್ಲಿ ಹದಗೆಟ್ಟ ರಸ್ತೆಗಳು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಬಗ್ಗೆ ಮಾಡೋದು ಬಿಟ್ಟು, ಎಲ್ಲೇ ಬಂದು ಆರೋಪ ಮಾಡೋದಲ್ಲ. ನನ್ನ ಮೇಲೆ ಮಾಡಿರುವ ಆರೋಪಗಳಿಗೆ ಈಗ ಮಾತನಾಡುವುದಿಲ್ಲ. ಸರ್ಕಾರದ ಎಲ್ಲಾ ವರದಿಗಳು ಬರಲಿ. ಆ ಬಳಿಕ ಮಾತನಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಬಿ ಟೀಂ ನಲ್ಲಿ ಉಳಿದಿರೋದೆ ಈ ಇಬ್ಬರು. ಅವು ಈಗ ಬೊಗಳುತ್ತಿವೆ. ಇನ್ನೊಬ್ಬ ಇದ್ದ, ಅವನು ಈ ಇಬ್ಬರನ್ನು ಬೊಗಳೋಕೆ ಬಿಟ್ಟು ಹೋದ. ಅವು ಈಗ ನನ್ನ ಮೇಲೆ ಬೊಗಳುತ್ತಿವೆ. ಶಾಸಕ ಬಿ.ಪಿ.ಹರೀಶ್ ಗೆ ಕಾಮನ್ ಸೆನ್ಸ್ ಇಲ್ಲ. ಅವನು ಶಾಸಕ ಹ್ಯಾಂಗದನೋ..? ನಿಜವಾಗಲು ಅವರನ್ನು ಆಯ್ಕೆ ಮಾಡಿ ಹರಿಹರ ಜನ ತಪ್ಪು ಮಾಡಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡೋದು ಬಿಟ್ಟು , ಎಲ್ಲಿಂದಲೋ ಬಂದು ನನ್ನ ಕ್ಷೇತ್ರದಲ್ಲಿ ಕಾಲಿಟ್ಟರೆ ಬಿಟ್ಟು ಬಿಡೋಕಾಗುತ್ತಾ..? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ಮಾತನಾಡುವುದಿಲ್ಲ. ಸರ್ಕಾರ ರಚಿಸುವ ಸಮಿತಿಗಳ ಎಲ್ಲಾ ವರದಿಗಳು ಬರಲಿ. ಆ ಬಳಿಕ ಹರೀಶ್ ಮೇಲಕ್ಕೆ ಎದ್ದೇಳದಂತೆ ಕೈ ಹೆಚ್ಚುತ್ತೇನೆ. ಅವನು ಎಷ್ಟು ಅಕ್ರಮ ಮಾಡಿದ್ದೇನೆ. ಎಲ್ಲೆಲ್ಲಿ ಏನು ಮಾಡಿದ್ದಾನೆ ಎಂಬುದನ್ನು ಎಲ್ಲವನ್ನೂ ತೆಗೆದು ಹಿಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.



