ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಮರ ಕಡಿಯಬೇಡಿ ಎನ್ನುವರಿಗಿಂತ ಕಡಿಯುವಂತೆ ಮೂರುಪಟ್ಟು ಜನರ ಒತ್ತಾಯ: ಮೇಯರ್

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ಬೆಂಗಳೂರು:  ರಾಮ್ ಅಂಡ್ ಕೋ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ  ಹೆಚ್ಚಾಗಿ ಉಂಟಾಗುತ್ತಿದೆ. ಅಲ್ಲಿನ ನಿವಾಸಿಗಳು ರಸ್ತೆಗೆ ಅಡ್ಡಲಾಗಿರುವ ಮರ ಕಡಿದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.  ಮರ ಕಡಿದಾಗ ಪಕ್ಕದಲ್ಲಿ ಗಿಡನೆಡ ಬೇಕಿದೆ. ಮರ ಕಡಿಯುವುದು ಬೇಡ ಎಂದು ಎಷ್ಟು ಜನ ಹೇಳುತ್ತಿದ್ದಾರೋ ಅದಕ್ಕಿಂದ ಮೂರುಪಟ್ಟು ಜನರು ಮರ ಕಡಿಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮೇಯರ್ ಅಜಯ್ ಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ್ ಅಂಡ್ ಕೋ ವೃತ್ತ ಅತೀ ದೊಡ್ಡ ಸರ್ಕಲ್.  ಈ ಹಿಂದೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಪುಟ್‌ಪಾತ್ ದೊಡ್ಡದಾಗಿ ಮಾಡಿ, ರಸ್ತೆ ಸಂಚಾರಕ್ಕೆ ಚಿಕ್ಕದಾಗಿದೆ. ಅದನ್ನು ತೆರವು ಮಾಡಿ ಹಿಂದೆ ಹಾಕಬೇಕು ಅಂದರೆ ಫುಟ್ ಪಾತ್ ನ್ನು ಚಿಕ್ಕದಾಗಿ ಮಾಡಿದಾಗ ಸರ್ಕಲ್ ದೊಡ್ಡದಾಗುತ್ತದೆ.

ಇನ್ನು ಇಲ್ಲಿನ  ಮರಕಡಿಯಲು ಬಿಡುವುದಿಲ್ಲಎಂದು  ಪರಿಸರ ಪ್ರೇಮಮಿಗಳು ಹೇಳುವುದು ಸಹಜ.  ಅವರಂತೆ ನಾನು ಕೂಡ ಸೇವಿಸುವುದು ಆಮ್ಲಜನಕವನ್ನೇ ಅವರಿಗಿರುವಷ್ಟು ಪರಿಸರದ ಕಾಳಜಿ ನಮಗೂ ಇದೆ. ಹಾಗೆಂದು ಜನರಿಗೆ ತೊಂದರೆ ನೀಡುವ ಕೆಲಸ ಎಂದಿಗೂ ಮಾಡುವುದಿಲ್ಲ.ಜನರಿಗೆ ಅನುಕೂಲವಾಗುತ್ತದೆ ಎಂದರೆ ಮರ ಕಡಿದು ಪಕ್ಕದಲ್ಲೇ ಸಸಿನೆಡುವ ಕಾರ್ಯ ಮಾಡಲಾಗುವುದು.

ಅದರ ನಿರ್ವಹಣೆಯೂ ನನ್ನ ಹೊಣೆ. ಮೈಸೂರು ನಗರದಂತೆ ದಾವಣಗೆರೆಯ ಅಭಿವೃದ್ದಿ ಮಾಡಲಾಗುವುದು ಬಜೆಟ್ ನಲ್ಲಿ ಘೋಷಿಸಿರುವಂತೆ 1 ಲಕ್ಷ ಸಸಿ ನೆಡುವ ಕಾರ್ಯಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ ಕೋಡುವ ಉದ್ದೇಶವಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ. ಮನೆಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯವನ್ನು ಶೀಘ್ರದಲ್ಲೇ ಕಾರ್ಯಗತ ಮಾಡಲಾಗುವುದು ಎಂದರು. ಈ ವೇಳೆ ಉಪಮೇಯರ್ ಸೌಮ್ಯ, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ಪಾಲಿಕೆ ಸದಸ್ಯರು ಇದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *