ದಾವಣಗೆರೆ: ದಾವಣಗೆರೆ ಜಿಲ್ಲೆಯ ಪ್ರಯಾಣಿಕರ ಅನುಕೂಲಕ್ಕಾಗಿ ಮಂತ್ರಾಲಯಕ್ಕೆ (Mantralayam) ಇನ್ಮುಂದೆ ಪ್ರತಿ ನಿತ್ಯ ಹವಾನಿಯಂತ್ರಿತ (AC) ವೋಲ್ಟ್ ಬಸ್ ಸೌಲಭ್ಯವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ರಂಭಿಸಿದೆ.
ದಾವಣಗೆರೆ; ಅಡಿಕೆ ದರ ದಿಢೀರ್ ಕುಸಿತ; ನ.24ರ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ಸಮಯ, ಮಾರ್ಗ
ಪ್ರತಿ ನಿತ್ಯ ರಾತ್ರಿ 9ಕ್ಕೆ ದಾವಣಗೆರೆ ನೂತನ ಬಸ್ ನಿಲ್ದಾಣದಿಂದ ಹೊರಡುವ ಬಸ್ ಚಿತ್ರದುರ್ಗ, ಬಳ್ಳಾರಿ ಮೂಲಕ ಬೆಳಗ್ಗೆ 4ಗಂಟೆಗೆ ಮಂತ್ರಾಲಯ ತಲುಪಲಿದೆ. ನಂತರ ಅದೇ ದಿನ ಬೆಳಿಗ್ಗೆ 11 ಗಂಟೆಗೆ ಮಂತ್ರಾಲಯದಿಂದ ಹೊರಡುವ ಬಸ್ ಸಂಜೆ 6ಕ್ಕೆ ದಾವಣಗೆರೆಗೆ ಮರಳಲಿದೆ.
ದಾವಣಗೆರೆ: ಜೆಡಿಎಸ್ ಮುಖಂಡ ಕೊಲೆಯತ್ನ ; ಕಾಂಗ್ರೆಸ್ ನಾಯಕಿ ಸವಿತಾ ಮಲ್ಲೇಶ್ ನಾಯ್ಕ ಬಂಧನ
ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಲು ಅವಕಾಶ
ಮಂತ್ರಾಲಯ ರಾಘವೇಂದ್ರಸ್ವಾಮಿ ದರ್ಶನಕ್ಕೆ (Raghavendra Math) ಪ್ರಯಾಣಿಸುವ ಆಸಕ್ತ ಪ್ರಯಾಣಿಕರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕೌಂಟರ್ ಅಥವಾ ksrtc.karnataka.gov.in ಸಂಪರ್ಕಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಎಂದು ಕೆಎಸ್ಆರ್ಟಿಸಿ ಹಿರಿಯವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್. ಶಿವಕುಮಾರಯ್ಯ ತಿಳಿಸಿದ್ದಾರೆ.ಸಂಸದೆ ಡಾ.ಪ್ರಭಾಮಲಿಕಾರ್ಜುನ್ ಇಂದು(ನ.25) ಸಂಜೆ 5ಕ್ಕೆ ಬಸ್ ಗಂಟೆಗೆ ಈ ನೂತನ ಸೇವೆಗೆ ಚಾಲನೆ ನೀಡಲಿದ್ದಾರೆ.



