ದಾವಣಗೆರೆ: ರಸ್ತೆ ಪಕ್ಕದಲ್ಲಿ ಹಾಕಿದ್ದ ಮೆಕ್ಕೆಜೋಳ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ 400ರಿಂದ 500 ಕ್ವಿಂಟಲ್ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿಯ ಜಮೀನವೊಂದಲ್ಲಿ ನಡೆದಿದೆ.
ದಾವಣಗೆರೆ: 2 ಸಾವಿರ ಮೌಲ್ಯದ ಟಿವಿ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ; 28 ವರ್ಷ ಬಳಿಕ ಬಂಧನ
ಕಡೇಮನೆ ಕುಮಾರ್, ಕಡೇಮನೆ ನಾಗರಾಜ್ ಹಾಗೂ ರಾಜು ತೋಪಾಳ್ ಎಂಬುವವರ ಮೂರು ರಾಶಿಗಳು ಬೆಂಕಿಗೆ ಸುಟ್ಟು ಹೋಗಿವೆ. ಒಣಗಿದ ಬೇಲಿ ಒಣ ಮತ್ತು ಮರದ ಎಲೆ ಉದುರಿದ್ದರಿಂದ ಯಾರೋ ಕಿಡಿಗೇಡಿಗಳು ಬೆಂಕಿ ಮಧ್ಯಾಹ್ನ ಹೊತ್ತಿದ ಅನುಮಾನ ಇದೆ. ಬೆಂಕಿ ನೋಡ ನೋಡುತ್ತಿದ್ದಂತೆ ಇಡೀ ರಾಶಿಗೂ ಆವರಿಸಿಕೊಂಡಿತು. ಸುಮಾರು 400 ರಿಂದ 500 ಕ್ವಿಂಟಲ್ ಮೆಕ್ಕೆಜೋಳ ಸುಟ್ಟಿದೆ ಭಸ್ಮವಾಗಿದೆ.
ದಾವಣಗೆರೆ: ಹೂಡಿಕೆ ಮಾಡಿದ್ರೆ ಅಧಿಕ ಲಾಭದ ಆಸೆತೋರಿಸಿ ಮಹಿಳಾ ಟೆಕ್ಕಿಗೆ ಬರೋಬ್ಬರಿ 93 ಲಕ್ಷ ವಂಚನೆ
ಬೆಲೆ ಕುಸಿತದಿಂದ ಕಾರಣದಿಂದ ರಾಶಿಯನ್ನು ರಸ್ತೆ ಪಕ್ಕದಲ್ಲಿ ಹಾಗೆಯೇ ಬಿಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಚನ್ನಗಿರಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.



