ದಾವಣಗೆರೆ: ನೀವು ಕಷ್ಟಪಟ್ಟು ಹಣ ಸಂಪಾದನೆ ಮಾಡಿ ಒಂದು ಮನೆ ಕಟೋಣ ಅಂತಾ ಖಾಲಿ ನಿವೇಶ ತೆಗೆದುಕೊಂಡು ಹಾಗೆ ಬಿಟ್ಟುಕೊಂಡಿದ್ದರೆ ಮುಗಿತು…! ನಿಮ್ಮ ಆಸ್ತಿ, 20 ವರ್ಷ ಬಿಟ್ಟ ಮೇಲೆ ನಿಮ್ಮ ಹೆಸರಲ್ಲಿಯೇ ಇರುತ್ತೆ ಎನ್ನುವುದೇ ಅನುಮಾನ ಎನ್ನುವಂತಾಗಿದೆ….!! ಏಕೆಂದರೆ ದೊಡ್ಡ ದೊಡ್ಡ ಬ್ಯಾಂಕ್ ಗಳನ್ನು ಹ್ಯಾಂಕ್ ಮಾಡಿ ಕೋಟ್ಯಂತರ ರೂಪಾಯಿ ದರೋಡೆ ಮಾಡುವುದನ್ನು ನೋಡಿದ್ದೇವೆ. ಆದರೆ ದಾವಣಗೆರೆ ಮಹಾನಗರ ಪಾಲಿಕೆ ಇ-ಆಸ್ತಿ ತಂತ್ರಾಂಶವೇ ಹ್ಯಾಕ್ ಮಾಡಿದ ಖದೀಮರು, ಐದು ಸ್ವತ್ತುಗಳಿಗೆ ಅಕ್ರಮ ಇ-ಆಸ್ತಿ ಅನುಮೋದನೆ ಪಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ದಾವಣಗೆರೆ ದಕ್ಷಿಣಕ್ಕೆ ಎಸ್.ಎಸ್.ಗಣೇಶ್ ಅಭ್ಯರ್ಥಿಯಾಗಲಿ; ಬಿಜೆಪಿ ಹಿರಿಯ ನಾಯಕ ರವೀಂದ್ರನಾಥ್
ಅಕ್ರಮವಾಗಿ ಇ-ಆಸ್ತಿಗಳಿಗೆ ಅನುಮೋದನೆ
ಮಹಾನಗರ ಪಾಲಿಕೆ ತಂತ್ರಾಂಶ ಹ್ಯಾಕ್ ಮಾಡಿ, ಯಾರದ್ದೋ ಹೆಸರಲ್ಲಿದ್ದ ಆಸ್ತಿಯನ್ನು ಮತ್ಯಾರಿಗೂ ಮಾಡುವ ಗ್ಯಾಂಗ್ ಹುಟ್ಟಿಕೊಂಡಿದೆ. ಸದ್ಯ ದಾವಣಗೆರೆ ಮಹಾನಗರ ಪಾಲಿಕೆಯ ಇ-ಆಸ್ತಿ ತಂತ್ರಾಂಶವನ್ನು ಹ್ಯಾಕ್ ಮಾಡಲಾಗಿದ್ದು, ಐದು ಸ್ವತ್ತುಗಳಿಗೆ ಅಕ್ರಮವಾಗಿ ‘ಇ-ಆಸ್ತಿ’ ಅನುಮೋದನೆ ಸಿಕ್ಕಿದೆ. ಅಧಿಕಾರಿಗಳ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಈ ಕೃತ್ಯ ಎಸಗಲಾಗಿದೆ. ಈ ಘಟನೆ ನಡೆದು 6 ತಿಂಗಳ ಬಳಿಕ ಪಾಲಿಕೆ ಅಧಿಕಾರಿಗಳಿಗೆ ಹ್ಯಾಕ್ ಮಾಡಿರುವುದು ಗೊತ್ತಾಗಿದೆ.
ಹ್ಯಾಕ್ ಆಗಿರುವುದು ಖಚಿತವಾದ ಬಳಿಕ ಸಿಇಎನ್ ಠಾಣೆಯಲ್ಲಿ ದೂರು
ಮಹಾನಗರ ಪಾಲಿಕೆಯ ಇ-ಸ್ವತ್ತು ತಂತ್ರಾಂಶದಲ್ಲಿ ಅಧಿಕಾರಿಗಳ ಗಮನಕ್ಕೆ ಬಾರದೇ ‘ಇ-ಸ್ವತ್ತು’ ಅನುಮೋದನೆ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ಹ್ಯಾಕ್ ಆಗಿರುವುದು ಖಚಿತವಾಗಿದೆ. ಈ ಸಂಬಂಧ ಸಿಇಎನ್ ಠಾಣೆಗೆ ಮಹಾನಗರ ಪಾಲಿಕೆಯ ವಲಯ ಕಚೇರಿ 1ರ ಆಯುಕ್ತ ಕೆ. ನಾಗರಾಜ್ ದೂರು ನೀಡಿದ್ದಾರೆ. ಈ ಬಗ್ಗೆ ಎಲ್ಲ ಆಯಾದಿಂದ ತನಿಖೆ ನಡೆಯುತ್ತಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಲಾಗಿನ್ ಐಡಿ, ಪಾಸ್ವರ್ಡ್ ದುರ್ಬಳಕೆ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್ಗಳಿವೆ. ಮೂರು ವಲಯ ಕಚೇರಿಗಳಲ್ಲಿ ಇ-ಆಸ್ತಿ ನಿರ್ವಹಣೆ ಮಾಡಲಾಗುತ್ತಿದೆ. ಆಸ್ತಿಗಳ ಹೊಸ ಖಾತೆ, ವರ್ಗಾವಣೆಯಂತ ಪ್ರಕ್ರಿಯೆಗಳು ವಲಯ ಆಯುಕ್ತರ ಲಾಗಿನ್ ಮೂಲಕ ಅನುಮೋದನೆ ಪಡೆಯುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಅರಿತವರು ಅಧಿಕಾರಿಗಳ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ದುರ್ಬಳಕೆ ಮಾಡಿಕೊಂಡು ಕೃತ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎಲ್ಲೆಲ್ಲಿ ಹ್ಯಾಕ್..?
ನಿಟುವಳ್ಳಿ, ಶಿವಕುಮಾರಸ್ವಾಮಿ ಬಡಾವಣೆ ಹಾಗೂ ದೊಡ್ಡಬೂದಿಹಾಳ್ ವ್ಯಾಪ್ತಿಯ 5 ಆಸ್ತಿಗಳನ್ನು ಬೇರೆ ಬೇರೆ ವಲಯ ಕಚೇರಿಗಳಲ್ಲಿ ಅನುಮೋದನೆ ಮಾಡಿಕೊಳ್ಳಲಾಗಿದೆ. 2025ರ ಜೂನ್ 12ರಿಂದ ನವೆಂಬರ್ 27ರ ಅವಧಿಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ವಲಯ ಆಯುಕ್ತರು ದೂರು ನೀಡಿದ್ದಾರೆ.



