Connect with us

Dvgsuddi Kannada | online news portal | Kannada news online

ಶಾಮನೂರು ಶಿವಶಂಕರಪ್ಪಗೆ ಬುದ್ಧಿ ಭ್ರಮಣೆ; ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ದಾಳಿ ಮಾಡಿಸುವಷ್ಟು ಸಣ್ಣತನಕ್ಕೆ ಇಳಿದಿಲ್ಲ; ಸಂಸದ ಸಿದ್ದೇಶ್ವರ

IMG 20230305 094452

ದಾವಣಗೆರೆ

ಶಾಮನೂರು ಶಿವಶಂಕರಪ್ಪಗೆ ಬುದ್ಧಿ ಭ್ರಮಣೆ; ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ದಾಳಿ ಮಾಡಿಸುವಷ್ಟು ಸಣ್ಣತನಕ್ಕೆ ಇಳಿದಿಲ್ಲ; ಸಂಸದ ಸಿದ್ದೇಶ್ವರ

ದಾವಣಗೆರೆ: ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪಗೆ ವಯಸ್ಸು ಆಗಿ ಬುದ್ಧಿ ಭ್ರಮಣೆ ಆಗಿರಬೇಕು. ನಾನು, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ದಾಳಿ ಮಾಡಿಸುವಷ್ಟು ಸಣ್ಣತನಕ್ಕೆ ಇಳಿದಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿಸಿದ್ದು, ಜಿ.ಎಂ.‌ಸಿದ್ದೇಶ್ವರ‌ ಅಂತಾ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ವಿರೂಪಾಕ್ಷಪ್ಪ ಸ್ನೇಹಿತರು. ಈ ಹಿಂದೆ ವಿರೂಪಾಕ್ಷಪ್ಪ ನನ್ನ ವಿರುದ್ಧ ಗಲಾಟೆ ಮಾಡಿದ್ದರು. ಇದನ್ನೇ ಆಧಾರಿಸಿ ನಮ್ಮ ಇಬ್ಬರ ನಡುವೆ ಮೈಮನಸ್ಸಿದೆ. ದಾಳಿ ಮಾಡಿಸಿದ್ದು ನಾನು ಎಂದಿದ್ದಾರೆ. ಶಾಮನೂರು‌ ಶಿವಶಂಕರಪ್ಪಗೆ ವಯಸ್ಸು ಆಯ್ತಲ್ಲ, ಹೀಗಾಗಿ ಬುದ್ಧಿ ಭ್ರಮಣೆ ಆಗಿರಬೇಕು. ಇದರಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.

ವಿರೂಪಾಕ್ಷಪ್ಪ ಪಕ್ಷದಿಂದ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ಅಧ್ಯಕ್ಷರು ನಿರ್ಧಾರ ಕೈಗೊಳ್ಳುತ್ತಾರೆ. ನಾನು ಅಧ್ಯಕ್ಷನಲ್ಲ, ಅಧ್ಯಕ್ಷನಾಗಿದ್ರೆ ಏನು ಮಾಡುತ್ತಿದ್ದೆ ಅಂತಾ ಹೇಳಬಹುದಿತ್ತು ಎಂದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top