Connect with us

Dvgsuddi Kannada | online news portal | Kannada news online

ದಾವಣಗೆರೆ: 13 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದ ಸಬ್​ ರಿಜಿಸ್ಟ್ರಾರ್​ ಸಿಬ್ಬಂದಿ

ದಾವಣಗೆರೆ

ದಾವಣಗೆರೆ: 13 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದ ಸಬ್​ ರಿಜಿಸ್ಟ್ರಾರ್​ ಸಿಬ್ಬಂದಿ

ದಾವಣಗೆರೆ: 13 ಸಾವಿರ ಲಂಚ ಪಡೆಯುವಾಗ ಸಬ್​ ರಿಜಿಸ್ಟ್ರಾರ್​ ಸಿಬ್ಬಂದಿಯೊಬ್ಬ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿ ಬಿದಿದ್ದಾರೆ. ಹರಿಹರ ಪಟ್ಟಣದ ಸಬ್​ ರಿಜಿಸ್ಟ್ರಾರ್​ ಕಚೇರಿಯ ದಸ್ತು ಬರಹಗಾರ ಎಂ.ಬಿ. ಪರಮೇಶ್ವರ್​ ಲೋಕಾಯುಕ್ತ ಬಲೆಗೆ ಬಿದ್ದಿದ್ದವರು.

ಹರಿಹರದ ನಿವಾಸಿಯಾದ ಮಂಜುನಾಥ್ ಎಂಬುವರು ಮನೆ ಖರೀದಿ ನೋಂದಣಿ ಪತ್ರ ಪಡೆಯಲು ಸಬ್​ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದು, ದಸ್ತು ಬರಹಗಾರ ಪರಮೇಶ್ವರ್​​ರನ್ನು ಸಂಪರ್ಕಿಸಿದ್ದರು. ಆದರೆ ಪರಮೇಶ್ವರ್ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮಂಜುನಾಥ್​ ಲೋಕಾಯುಕ್ತರಿಗೆ ದೂರು ನೀಡಿದ್ದರು. ಶನಿವಾರ ರಾತ್ರಿ ಸಬ್​ ರಿಜಿಸ್ಟ್ರಾರ್​ ಕಚೇರಿ ಬಳಿ, ಪರಮೇಶ್ವರ್​ ಅವರು ಮಂಜುನಾಥ್​​ರಿಂದ 13 ಸಾವಿರ ರೂಪಾಯಿ ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಲೋಕಾಯುಕ್ತ ಎಸ್​​​ಪಿ ಎಂ.ಎಸ್ . ಕೌಲಾಪುರೆ, ಇನ್​ಸ್ಪೆಕ್ಟರ್​ ರಾಷ್ಟ್ರಪತಿ ಎಚ್​.ಎಸ್. ಆಂಜನೇಯ ನೇತೃತ್ವದಲ್ಲಿ ದಾಳಿ ನಡೆದಿತ್ತು. ಆರೋಪಿ ಎಂ.ಬಿ.ಪರಮೇಶ್ವರ್​​​ನಿಂದ 40 ಸಾವಿರ ರೂಪಾಯಿ ನಗದು ಮತ್ತು ವಿವಿಧ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top