Connect with us

Dvgsuddi Kannada | online news portal | Kannada news online

ದಾವಣಗೆರೆಯಿಂದ ಜೋಗ-ಶಿರಸಿ ಪ್ರವಾಸ ಹೋಗುವ ಪ್ಲ್ಯಾನ್ ಇದ್ಯಾ..? ಜು.16 ರಿಂದ ಪ್ರತಿ ಭಾನುವಾರ ಕೆಎಸ್‍ಆರ್‍‌ ಟಿಸಿ ವಿಶೇಷ ಬಸ್ ವ್ಯವಸ್ಥೆ

n4605182721673314627404b3c6d49958d055cf3d65435cbdd798c979e158ccf5e5bb456dfafc88a6512f3f

ದಾವಣಗೆರೆ

ದಾವಣಗೆರೆಯಿಂದ ಜೋಗ-ಶಿರಸಿ ಪ್ರವಾಸ ಹೋಗುವ ಪ್ಲ್ಯಾನ್ ಇದ್ಯಾ..? ಜು.16 ರಿಂದ ಪ್ರತಿ ಭಾನುವಾರ ಕೆಎಸ್‍ಆರ್‍‌ ಟಿಸಿ ವಿಶೇಷ ಬಸ್ ವ್ಯವಸ್ಥೆ

ದಾವಣಗೆರೆ; ದಾವಣಗೆರೆ ಹಾಗೂ ಹರಿಹರರಿಂದ ಜೋಗ ಮತ್ತು ಶಿರಸಿಗೆ ಜುಲೈ 16 ರಿಂದ ಪ್ರತಿ ಭಾನುವಾರಗಳಂದು ಪ್ರಯಾಣಿಕರಿಗೆ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆಯಡಿ ಸೌಲಭ್ಯ ಕಲ್ಪಿಸಲಾಗಿದೆ.

ಬೆಳಿಗ್ಗೆ 7 ಗಂಟೆಗೆ ದಾವಣಗೆರೆಯಿಂದ ಹೊರಟು 10.30 ಕ್ಕೆ ಶಿರಸಿ, ಮಧ್ಯಾಹ್ನ 12 ಗಂಟೆಗೆ ಶಿರಸಿಯಿಂದ ಹೊರಟು 1.30 ಕ್ಕೆ ಜೋಗ, ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 8 ಗಂಟೆಗೆ ದಾವಣಗೆರೆ ತಲುಪುವುದು. ಎರಡೂ ಕಡೆ ಸೇರಿ ನೇರ ಪ್ರಯಾಣಿಕರಿಗೆ ರೂ.600 ಮತ್ತು ಮಕ್ಕಳಿಗೆ ರೂ.450 ಪ್ರಯಾಣ ದರ ಹಾಗೂ ಹರಿಹರದಿಂದ ಬೆಳಿಗ್ಗೆ 7.30 ಗಂಟೆಗೆ ಹೊರಟು 10.30 ಕ್ಕೆ ಶಿರಸಿ, ಮಧ್ಯಾಹ್ನ 12 ಗಂಟೆಗೆ ಶಿರಸಿಯಿಂದ ಹೊರಟು 1.30 ಕ್ಕೆ ಜೋಗ, ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 7.30 ಗಂಟೆಗೆ ದಾವಣಗೆರೆ ತಲುಪುವುದು. ಎರಡೂ ಕಡೆ ಸೇರಿ ನೇರ ಪ್ರಯಾಣಿಕರಿಗೆ ರೂ.575 ಮತ್ತು ಮಕ್ಕಳಿಗೆ ರೂ.430 ಪ್ರಯಾಣ ದರ ಇರುತ್ತದೆ.

ಮುಂಗಡ ಬುಕ್ಕಿಂಗ್ ಮಾಡಲು ಬುಕ್ಕಿಂಗ್ ಕೌಂಟರ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕರಾರಸಾ ನಿಗಮದ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top