ದಾವಣಗೆರೆ; ಶ್ರೀಕ್ಷೇತ್ರ ಉಚ್ಚಂಗಿದುರ್ಗದ (Uchangidurga) ಭರತ ಹುಣ್ಣಿಮೆ ಹಿನ್ನೆಲೆ ಫೆ.11 ರಿಂದ 13 ರವರೆಗೆ ಜರುಗಲಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ದಾವಣಗೆರೆ ವಿಭಾಗದ ಘಟಕಗಳಿಂದ 45 ಹೆಚ್ಚುವರಿ ವಿಶೇಷ ಬಸ್ಗಳ ಸಂಚಾರ ಕಲ್ಪಿಸಲಾಗಿದೆ.
ಫೆಬ್ರವರಿ 14 ರಂದು ನಡೆಯುವ ಮೈಲಾರ ಕಾರ್ಣಿಕೋತ್ಸವ (Mailara Jaatre) ಪ್ರಯುಕ್ತ ಫೆ.13 ರಿಂದ 15 ರವರೆಗೆ ಭಕ್ತಾದಿಗಳ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ದಾವಣಗೆರೆ ವಿಭಾಗದಿಂದ 75 ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.



